ಪಾಕಿಸ್ತಾನದ ಬಿಎಟಿ ದಾಳಿ ವಿಫಲಗೊಳಿಸಿದ ಸೇನೆ: ಓರ್ವ ಉಗ್ರನ ಹತ್ಯೆ, 3 ಯೋಧರಿಗೆ ಗಾಯ

ಗಡಿಯಲ್ಲಿ ನಿರಂತರ ಪುಂಡಾಟಿಕೆ ನಡೆಸುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಫೆ.19 ರಂದೂ ತಕ್ಕ ಪಾಠ ಕಲಿಸಿದೆ. ಎಲ್ಒಸಿಯಲ್ಲಿ ಪಾಕಿಸ್ತಾನದ ಬಾರ್ಡರ್ ಆಕ್ಷನ್ ಟೀಂ ನ ದಾಳಿಯನ್ನು ವಿಫಲಗೊಳಿಸುವಲ್ಲಿ
ಪಾಕಿಸ್ತಾನದ ಬಿಎಟಿ ದಾಳಿ ವಿಫಲಗೊಳಿಸಿದ ಸೇನೆ: ಓರ್ವ ಉಗ್ರನ ಹತ್ಯೆ, 3 ಯೋಧರಿಗೆ ಗಾಯ
ಪಾಕಿಸ್ತಾನದ ಬಿಎಟಿ ದಾಳಿ ವಿಫಲಗೊಳಿಸಿದ ಸೇನೆ: ಓರ್ವ ಉಗ್ರನ ಹತ್ಯೆ, 3 ಯೋಧರಿಗೆ ಗಾಯ
Updated on
ಶ್ರೀನಗರ: ಗಡಿಯಲ್ಲಿ ನಿರಂತರ ಪುಂಡಾಟಿಕೆ ನಡೆಸುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಫೆ.19 ರಂದೂ ತಕ್ಕ ಪಾಠ ಕಲಿಸಿದೆ. ಎಲ್ಒಸಿಯಲ್ಲಿ ಪಾಕಿಸ್ತಾನದ ಬಾರ್ಡರ್ ಆಕ್ಷನ್ ಟೀಂ ನ ದಾಳಿಯನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿರುವ ಭಾರತೀಯ ಸೇನೆ ಓರ್ವ ಉಗ್ರನನ್ನು ಹತ್ಯೆ ಮಾಡಿದೆ. 
ಭಯೋತ್ಪಾದಕರು ಹಾಗೂ ಸೇನಾ ಸಿಬ್ಬಂದಿಗಳ ನಡುವಿನ ಗುಂಡಿನ ಕಾಳಗದಲ್ಲಿ 3 ಯೋಧರಿಗೆ ಗಾಯಗಳುಂಟಾಗಿದ್ದು, ಇಬ್ಬರು ಭಯೋತ್ಪಾದಕರಿಗೂ ಗಾಯಗಳುಂಟಾಗಿದೆ. ಜಮ್ಮುವಿನ ಕರ್ನಲ್ ದೇವೇಂದರ್ ಆನಂದ್ ಈ ಬಗ್ಗೆ ಮಾಹಿತಿ ನೀಡಿದ್ದು, ಪಾಕಿಸ್ತಾನದ ಸೇನೆ ಸಣ್ಣ ಶಸ್ತ್ರಾಸ್ತ್ರಗಳ ಮೂಲಕ ದಾಳಿ ನಡೆಸಲು ಮುಂದಾಯಿತು, ಅದೇ ಮಾದರಿಯ ಶಸ್ತ್ರಾಸ್ತ್ರಗಳಿಂದ ಭಾರತೀಯ ಸೇನೆ ಸಹ ಪಾಕ್ ಗೆ ಪ್ರತ್ಯುತ್ತರ ನೀಡಿದ್ದು ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದು ಗುಂಡಿನ ದಾಳಿಯಲ್ಲಿ ಗಾಯಗೊಂಡ ಯೋಧನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com