ಚೆನ್ನೈ: ನಟ ಕಮಲಹಾಸನ್ ಅವರ ರಾಜಕೀಯ ಪಕ್ಷ ನಾಳೆ ಮದುರೈನಲ್ಲಿ ಅಸ್ತಿತ್ವಕ್ಕೆ ಬರಲಿದೆ. ನಂತರ ಅವರು ತಮಿಳುನಾಡಿನಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ.
ಈ ಹಿನ್ನೆಲೆಯಲ್ಲಿ ಮೂವರು ಮಾಜಿ ಚುನಾವಣಾಧಿಕಾರಿಗಳನ್ನು ಕಮಲ್ ಹಾಸನ್ ಭೇಟಿಯಾಗಿ ಮಾತುಕತೆ ನಡೆಸಿದರು. ಟಿ.ಎನ್. ಶೇಷನ್, ಎನ್. ಗೋಪಾಲಸ್ವಾಮಿ, ಹಾಗೂ ಟಿ.ಎಸ್. ಕೃಷ್ಣಮೂರ್ತಿ ಅವರೊಂದಿಗೆ ಹಲವು ವಿಷಯ ಕುರಿತಂತೆ ಕಮಲ್ ಹಾಸನ್ ಚರ್ಚೆ ನಡೆಸಿದ್ದಾರೆ.
ಪಕ್ಷದ ನೋಂದಣಿ, ಚಿಹ್ನೆ, ಪ್ರಣಾಳಿಕೆ, ಆದಾಯ ತೆರಿಗೆ ಪಾವತಿ, ಸೇರಿದಂತೆ ರಾಜಕೀಯ ವ್ಯಕ್ತಿಗಳು ಹೊಂದಿರಬೇಕಾದ ಪ್ರತಿಯೊಂದು ವಿಷಯದ ಬಗ್ಗೆಯೂ ಕಮಲ್ ಹಾಸನ್ ಮಾಹಿತಿ ಕೇಳಿದ್ದಾರೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕಮಲ್ ಹಾಸನ್, ಮಾಜಿ ಚುನಾವಣಾಧಿಕಾರಿಗಳಿಂದ ಪ್ರಜಾಪ್ರಭುತ್ವ ಸಂಸ್ಥೆಯ ಬಗ್ಗೆ ಆಳವಾಗಿ ಅರ್ಥಮಾಡಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
Advertisement