ಆರ್ ಎ ಪೋಡಾರ್ ಕಾಲೇಜ್ ಆಫ್ ಕಾಮರ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಸಂಸತ್ ಮೇಲೆ ದಾಳಿ ನಡೆಸಿದ್ದ ಭಯೋತ್ಪಾದಕ ಅಫ್ಜಲ್ ಗುರು ನನ್ನು ಆದರ್ಶ ಪುರುಷನನ್ನಾಗಿ ಸ್ಮರಿಸುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಅಪ್ಜಲ್ ಗುರು ಹೆಸರನ್ನು ಒಂದಷ್ಟು ಜನರು ಘೋಷಣೆಯಾಗಿ ಕೂಗುತ್ತಾರೆ, ಆತ ಸಂಸತ್ ನ್ನು ಉಡಾಯಿಸಲು ಯತ್ನಿಸಿದ್ದ ಎಂದಿದ್ದಾರೆ.