ಇಶ್ರಾತ್ ಜಹಾನ್ ಎನ್ ಕೌಂಟರ್ ಪ್ರಕರಣ: ಗುಜರಾತ್ ನಿವೃತ್ತ ಡಿಜಿಪಿ ಪಿಪಿ ಪಾಂಡೆ ಬಿಡುಗಡೆ

ಇಶ್ರಾತ್ ಜಹಾನ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಗುಜರಾತಿನ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಪಿ. ಪಿ. ಪಾಂಡೆ ಅವರನ್ನು ಸಿಬಿಐ ನ್ಯಾಯಾಲಯ ಬಿಡುಗಡೆಗೊಳಿಸಿದೆ.
ನಕಲಿ ಎನ್ ಕೌಂಟರ್ ನಲ್ಲಿ ಹತ್ಯೆಗೀಡಾಗಿದ್ದ ಇಶ್ರಾತ್ ಜಹಾನ್ ಚಿತ್ರ
ನಕಲಿ ಎನ್ ಕೌಂಟರ್ ನಲ್ಲಿ ಹತ್ಯೆಗೀಡಾಗಿದ್ದ ಇಶ್ರಾತ್ ಜಹಾನ್ ಚಿತ್ರ

ನವದೆಹಲಿ:  ಇಶ್ರಾತ್ ಜಹಾನ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಗುಜರಾತಿನ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಪಿ. ಪಿ. ಪಾಂಡೆ ಅವರನ್ನು ಸಿಬಿಐ ನ್ಯಾಯಾಲಯ ಬಿಡುಗಡೆಗೊಳಿಸಿದೆ.

ಮುಂಬೈ ಬಳಿ ನಡೆದಿದ್ದ 19 ವರ್ಷದ ಬಾಲಕಿ ಎನ್ ಕೌಂಟರ್ ನಡೆದಾಗ ಪಾಂಡೆ ರಾಜ್ಯ ಅಪರಾಧ ವಿಭಾಗದ ಮುಖ್ಯಸ್ಥರಾಗಿದ್ದರು.

  2004 ಜೂನ್ 15 ರಂದು ಅಹ್ಮಬಾದಿನ ಹೊರವಲಯದಲ್ಲಿ ನಡೆದಿದ್ದ ಎನ್ ಕೌಂಟರ್ ವೇಳೆ ಜಾವೇದ್ ಷೈಕ್ ಅಲಿಯಾಸ್ ಪ್ರಣೇಶ್ ಪಿಲೈ,  ಅಮ್ಜದ್ ಆಲಿ ಅಕ್ಬರಲಿ ರಾಣಾ ಮತ್ತು ಜೇಸನ್ ಜೋಹರ್  ಅವರು ಇಶ್ರಾತ್ ಜಹಾನ್ ಅವರನ್ನು ಹತ್ಯೆ ಮಾಡಿದ್ದರು.

 ಅವರೆಲ್ಲರೂ ಉಗ್ರರೊಂದಿಗೆ ನಂಟು ಹೊಂದಿದ್ದು, ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರಮೋದಿ ಅವರನ್ನು ಬಂಧಿಸಲು ಸಂಚು ರೂಪಿಸಿದ್ದರು ಎಂದು ಗುಜರಾತ್ ಪೊಲೀಸರು ಹೇಳಿಕೆ ದಾಖಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com