ನೀರವ್ ಮೋದಿ ದೇಶಭ್ರಷ್ಟರಲ್ಲ: ವಕೀಲರ ಸಮರ್ಥನೆ

ಪಂಜಾಬ್ ನ್ಯಾಷನಲ್ ಬ್ಯಾಂಕಿನ 11.400 ಕೋಟಿ ರೂ. ಹಗರಣದ ಪ್ರಮುಖ ಆರೋಪಿ ಎನ್ನಲಾಗಿರುವ ಆಭರಣ ಉದ್ಯಮಿ ನೀರವ್ ಮೋದಿ ದೇಶಭ್ರಷ್ಟರಲ್ಲ ಎಂದು ನೀರಾವ್ ಮೋದಿ ಪರ ವಕೀಲ ವಿಜಯ್ ಆಗರ್ ವಾಲ್ ಸಮರ್ಥಿಸಿಕೊಂಡಿದ್ದಾರೆ.
ನೀರವ್ ಮೋದಿ ಪರ ವಕೀಲ ವಿಜಯ್ ಅಗರ್ ವಾಲ್  ಚಿತ್ರ
ನೀರವ್ ಮೋದಿ ಪರ ವಕೀಲ ವಿಜಯ್ ಅಗರ್ ವಾಲ್ ಚಿತ್ರ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿನ 11.400 ಕೋಟಿ ರೂ. ಹಗರಣದ ಪ್ರಮುಖ ಆರೋಪಿ ಎನ್ನಲಾಗಿರುವ ಆಭರಣ ಉದ್ಯಮಿ ನೀರವ್ ಮೋದಿ ದೇಶಭ್ರಷ್ಟರಲ್ಲ ಎಂದು ನೀರಾವ್ ಮೋದಿ ಪರ ವಕೀಲ ವಿಜಯ್ ಆಗರ್ ವಾಲ್ ಸಮರ್ಥಿಸಿಕೊಂಡಿದ್ದಾರೆ.

ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿದ ವಿಜಯ್ ಅಗರ್ ವಾಲ್, ವ್ಯಕ್ತಿ ಅಥವಾ ಸಂಸ್ಥೆಯ ಪ್ರತಿನಿಧಿ ಮುಂದೆ ಹಾಜರಾಗುವಂತೆ ಯಾವುದಾದರೂ ನೋಟಿಸ್ ನೀಡಲಾಗಿದೆಯಾ ? ವ್ಯವಹಾರದ ಹಿನ್ನೆಲೆಯಲ್ಲಿ ಹಲವು ಮಂದಿ ದೇಶದಿಂದ ಹೊರಗೆ ಇದ್ದಾರೆ ಅಂತಹದ್ದರಲ್ಲಿ ಹೇಗೆ ನೀರವ್ ಮೋದಿಗೆ ದೇಶ ಭ್ರಷ್ಟ ಎಂದು ಕರೆಯುತ್ತಿರಾ ಎಂದು ಪ್ರಶ್ನೆ ಮಾಡಿದ್ದಾರೆ.

ಈ ಪ್ರಕರಣ ಸಂಬಂಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದ ನಂತರ ಸೂಕ್ತ ಕಾರ್ಯತಂತ್ರ ರೂಪಿಸಲಾಗುವುದು ಎಂದು  ಅವರು ಹೇಳಿದ್ದಾರೆ.

ಈ ಪ್ರಕರಣದ ಮೂಲವೇ ತಪ್ಪಿನಿಂದ ಕೂಡಿದೆ ಬ್ಯಾಂಕಿನ ಪ್ರತಿಯೊಂದು ದಾಖಲೆಯನ್ನು ಪರಿಶೀಲಿಸುತ್ತಿದ್ದೇನೆ ಎಂದು ವಿಜಯ್ ಅಗರ್ ವಾಲ್ ತಿಳಿಸಿದ್ದಾರೆ.ನೀರವ್ ಮೋದಿ ಎಲ್ಲೂ ದೇಶ ಬಿಟ್ಟು ಹೋಗಿಲ್ಲ, ವ್ಯವಹಾರದ ಉದ್ದೇಶದಿಂದ ಭಾರತದಿಂದ ಹೊರಗೆ ಉಳಿದಿದ್ದಾರೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com