ಜಲಂದರ್: ಗಂಡನ ಅಕ್ರಮ ಸಂಬಂಧದಿಂದ ಬೇಸತ್ತ ಗೃಹಿಣಿಯೊಬ್ಬರು ಆತನ ಶಿಶ್ನವನ್ನು ಕತ್ತರಿಸಿ ಶೌಚಾಲಯದಲ್ಲಿ ವಿಲೇವಾರಿ ಮಾಡಿದ್ದಾರೆ.
ಜೋಗಿಂದರ್ ನಗರದ ನಿವಾಸಿ ಅಜಾದ್ ಸಿಂಗ್ ಮರ್ಮಾಂಗವನ್ನು ಪತ್ನಿ ಸುಖ್ವಂತ್ ಕೌರ್ ಚಾಕುವಿನಿಂ ಕತ್ತರಿಸಿ ಅದನ್ನು ಶೌಚಾಲಯದಲ್ಲಿ ವಿಲೇವಾರಿ ಮಾಡಿದ್ದಾರೆ ಎಂದು ಜಲಂದರ್ ಸಹಾಯಕ ಪೊಲೀಸ್ ಆಯುಕ್ತ ಸತೀಂದರ್ ಕುಮಾರ್ ಹೇಳಿದ್ದಾರೆ.
ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಅಜಾದ್ ಸಿಂಗ್ ರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಪರಿಸ್ಥಿತಿ ಗಂಭೀರವಾಗಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದರು.
ಅಜಾದ್ ಸಿಂಗ್ ತಂದೆ ದೂರಿನನ್ವಯ ಮಹಿಳೆಯ ಮೇಲೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.