ಇದೇ ವೇಳೆ ಕಾವೇರಿ ವಿವಾದ ಸಂಬಂಧ ತಮಿಳುನಾಡು ರೈತರು ಕಳೆದ ವರ್ಷ ತಿಂಗಳಾನುಗಟ್ಟಲೆ ರಾಜಧಾನಿ ದೆಹಲಿಯಲ್ಲಿ ನಡೆಸಿದ ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ವಿಚಾರವನ್ನು ರಾಜಕೀಯ ಮಾಡಲಾಗುತ್ತಿದೆ. ರೈತರಿಗೆ ಲಾಭ ಮಾಡಲು ಭಾರತದ ಇತಿಹಾಸದಲ್ಲಿಯೇ ಮೋದಿ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಯೂರಿಯಾ, ರೈತರ ಆದಾಯ ದ್ವಿಗುಣಗೊಳಿಸುವುದು ಹೀಗೆ ನಾನಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. 25 ವರ್ಷಗಳಿಂದಲೂ ಜಾರಿಯಾಗದೆ ಸ್ಥಗಿತಗೊಂಡಿದ್ದ 99 ನೀರಾವರಿ ಯೋಜನೆಗೆ ರೂ.50,000 ಕೋಟಿಯನ್ನು ಸರ್ಕಾರ ಮೀಸಲಿಟ್ಟಿದೆ ಎಂದಿದ್ದಾರೆ.