ಉದಯಪುರ(ರಾಜಸ್ಥಾನ): 2008ರ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಒಂದೇ ಮತದಿಂಡ ಗೆದ್ದಿದ್ದ ಬಿಜೆಪಿ ಶಾಸಕ ಕಲ್ಯಾಣ್ ಸಿಂಗ್ ಚೌಹಾಣ್ ಸುದೀರ್ಘ ಅನಾರೋಗ್ಯದ ಬಳಿಕ ಬುಧವಾರ ಮ್ತಪಟ್ಟಿದ್ದಾರೆ.
ರಾಜಸ್ಥಾನದ ನಾಥದ್ವಾರ ಕ್ಷೇತ್ರದ ಶಾಸಕರಾಗಿದ್ದ ಕಲ್ಯಾಣ್ ಸಿಂಗ್ 2008ರಲ್ಲಿ ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ಜೋಷಿ ಅವರನ್ನು ಏಕೈಕ ಮತದಿಂದ ಪರಾಭವಗೊಳಿಸಿ ದಾಖಲೆ ಮಾಡಿದ್ದರು.
ಇದೇ ವೇಳೆ ಅಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯ ಸಾಧಿಸಿದ್ದರೂ ರಾಜ್ಯಾಧ್ಯಕ್ಷರೇ ಸೋಲನುಭವಿಸಿದ್ದು ವಿಶೇಷವಾಗಿತ್ತು.