ಸಾಲಮನ್ನಾ, ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಮಧ್ಯಪ್ರದೇಶದಲ್ಲಿ ರೈತರು ಸುಧೀರ್ಘ ಪ್ರತಿಭಟನೆಗಳನ್ನು ನಡೆಸುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮಧ್ಯಪ್ರದೇಶದ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಗೋಪಾಲ್ ಭಾರ್ಗವ ಅವರು, ಶಾಸಕರೂ ಕೂಡ ಸಾಯುತ್ತಾರೆ, ನಷ್ಟ ಎದುರಾದರೆ ಉದ್ಯಮಿಗಳೂ ಸಾವನ್ನಪ್ಪುತ್ತಾರೆ, ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ವಿದ್ಯಾರ್ಥಿಗಳೂ ಕೂಡ ಸಾಯುತ್ತಾರೆ, ಕಳೆದ ನಾಲ್ಕು ವರ್ಷಗಳಲ್ಲಿ 10 ಶಾಸಕರು ಸಾವನ್ನಪ್ಪಿದ್ದಾರೆ, ಸಾವನ್ನು ಯಾರಿಂದಲಾದರೂ ತಡೆಯಲು ಸಾಧ್ಯವೇ? ಶಾಸಕರನು ಅಮರರೇ? ಎಂದು ಪ್ರಶ್ನಿಸಿದ್ದಾರೆ.