ಇದಲ್ಲದೆ ಮತ್ತೊಂದು ಬಾಂಬ್ ಸಿಡಿಸಿರುವ ಸ್ವಾಮಿ, ಬಾಲಿವುಡ್ ನಟಿಯರ ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂ ನಡುವಿನ ಸಂಬಂಧಗಳ ಕುರಿತು ಗಮನ ಹರಿಸಬೇಕಿದೆ. ನಟಿ ಶ್ರೀದೇವಿಯದ್ದು ಸಾವಲ್ಲ ಹತ್ಯೆ ಎನ್ನಲು ಮತ್ತಷ್ಟು ಕಾರಣಗಳಿದ್ದು, ಮರಣೋತ್ತರ ಪರೀಕ್ಷೆಯೇ ಆಕೆ ಬಾತ್ ಟಬ್ ನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ ಎಂದು ಹೇಳುತ್ತಿದೆ. ಹೀಗಿರುವಾಗ ವೈದ್ಯನೋರ್ವ ತುರ್ತಾಗಿ ಆಗಮಿಸಿ ಆಕೆ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ಹೇಗೆ ಹೇಳಿದ ಎಂದು ಹೇಳುವ ಮೂಲಕ ನಟಿ ಶ್ರೀದೇವಿ ಸಾವಿನಲ್ಲಿ ಭೂಗತ ಪಾತಕಿಯ ಕೈವಾಡವಿರಬಹುದೇ ಎಂಬ ಅನುಮಾನ ಕೂಡ ಹುಟ್ಟುಹಾಕಿದ್ದಾರೆ.