ಮುಕ್ತ ಮಾರುಕಟ್ಟೆಯಲ್ಲಿ ಆ್ಯಸಿಡ್ ಮಾರಾಟವನ್ನು 2013ರಲ್ಲಿಯೇ ಸುಪ್ರೀಂ ಕೋರ್ಟ್ ನಿಷೇಧಿಸಿದೆ. ಹಾಗಿದ್ದೂ ಆರೋಪಿಗಳು ಹೇಗೆ ಆ್ಯಸಿಡ್ ಪಡೆದಿದ್ದಾರೆ ಎನ್ನುವುದನ್ನು ತನಿಖೆ ನಡೆಸಿ ತಿಳಿದುಕೊಳ್ಳಲಾಗುತ್ತದೆ. ನಾಪತ್ತೆಯಾಗಿರುವ ಆರೋಪಿ ವಿಜಯ್ ಆ್ಯಸಿಡ್ ಸರಬರಾಜು ಮಾಡಿದ್ದಾನೆ ಎನ್ನಲಾಗಿದ್ದು ಅವನ ತಂದೆಯನ್ನು ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕೊಲೆಗೆ ಯತ್ನ, ಉದ್ದೇಶಪೂರ್ವಕ ಗಾಯಗೊಳಿಸುವ ಪ್ರಕರಣದಡಿಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಂಡಿರುವುದಾಗಿ ಪೋಲೀಸರು ಮಾಹಿತಿ ನೀಡಿದರು.