ಮಧುರೈ: ಮಧುರೈ ಮೀನಾಕ್ಷಿ ದೇವಾಲಯದಲ್ಲಿ ಮಾ.03 ರಿಂದ ಭಕ್ತಾದಿಗಳು ಮೊಬೈಲ್ ತೆಗೆದುಕೊಂಡು ಹೋಗಿವುದಕ್ಕೆ ನಿರ್ಬಂಧ ಜಾರಿಯಾಗಲಿದೆ.
ದೇವಾಲಯದ ಆಡಳಿತ ಮಂಡಳಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಮದ್ರಾಸ್ ಹೈಕೋರ್ಟ್ ನ ಮಧುರೈ ಪೀಠದ ಆದೇಶದ ಅನುಸಾರವಾಗಿ ಪುರಾತನ ದೇವಾಲಯದ ಭದ್ರತೆ ದೃಷ್ಟಿಯಿಂದ ಭಕ್ತಾದಿಗಳು ಮೊಬೈಲ್ ತೆಗೆದುಕೊಂಡು ಹೋಗುವುದಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿಸಿದೆ.
ದೇವಾಲಯದಲ್ಲಿ ಭದ್ರತೆಯ ಬಗ್ಗೆ ಹೆಚ್ಚಿನ ಗಮನ ನೀಡಬೇಕೆಂದು ಆಗ್ರಹಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ್ದ ನ್ಯಾ.ಎನ್ ಕಿರುಬಕರನ್ ಹಾಗೂ ಆರ್ ಧರಣಿ ಅವರಿದ್ದ ವಿಭಾಗೀಯ ಪೀಠ ದೇವಾಲಯದಲ್ಲಿ ಮೊಬೈಲ್ ಗೆ ನಿರ್ಬಂಧ ವಿಧಿಸಬೇಕು ಎಂದು ಫೆ.09 ರಂದು ಆದೇಶ ನೀಡಿತ್ತು.