ಮೀಸಲಾತಿ ಮತ್ತು ಸಂವಿಧಾನ ಎಂಬ ಎರಡು ವಿಷಯಗಳನ್ನು ಮುಂದಿಟ್ಟುಕೊಂಡಿರುವ ಎನ್ ಡಿಎ ದೇಶದ ಜನತೆಯನ್ನು ಒಡೆಯುತ್ತಿದೆ, ದಲಿತರ ಮೇಲಿನ ದೌರ್ಜನ್ಯ ಮತ್ತು ಬಡತನ ಸಮಸ್ಯೆಗಳು ಪ್ರತಿ ದಿನ ಹೆಚ್ಚಾಗುತ್ತಿವೆ. ಬಿಹಾರಕ್ಕೆ ವಿಶೇಷ ಪ್ರಾತಿನಿದ್ಯ ನೀಡಲಾಗಿಲ್ಲ, ಜೊತೆಗೆ ಬಜೆಟ್ ನಲ್ಲಿ ಘೋಷಿಸಲಾದ ಹಲವು ನೀತಿಗಳನ್ನು ಇನ್ನೂ ಅನುಷ್ಠಾನಕ್ಕೆ ತಂದಿಲ್ಲ ಎಂದು ತೇಜಸ್ವಿ ಯಾದವ್ ಆರೋಪಿಸಿದ್ದಾರೆ.