ತಮಿಳುನಾಡು ರಾಜಕೀಯದಲ್ಲಿ ಆಧ್ಯಾತ್ಮಕ್ಕೆ ಅವಕಾಶವಿಲ್ಲ: ರಜಿನಿಗೆ ಸ್ಟ್ಯಾಲಿನ್ ಟಾಂಗ್

ತಮಿಳುನಾಡು ರಾಜಕೀಯದಲ್ಲಿ ಆಧ್ಯಾತ್ಮಕ್ಕೆ ಅವಕಾಶವಿಲ್ಲ ಎಂದು ಡಿಎಂಕೆ ನಾಯಕ ಸ್ಟ್ಯಾಲಿನ್ ಇತ್ತೀಚೆಗಷ್ಟೇ ರಾಜಕಾರಣಕ್ಕೆ ಪ್ರವೇಶಿಸಿರುವ ರಜಿನಿಕಾಂತ್ ಗೆ ಟಾಂಗ್ ನೀಡಿದ್ದಾರೆ.
ರಜನಿಕಾಂತ್ ಡಿಎಂಕೆ ನಾಯಕ ಕರುಣಾನಿಧಿ ಭೇಟಿ
ರಜನಿಕಾಂತ್ ಡಿಎಂಕೆ ನಾಯಕ ಕರುಣಾನಿಧಿ ಭೇಟಿ
Updated on
ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಆಧ್ಯಾತ್ಮಕ್ಕೆ ಅವಕಾಶವಿಲ್ಲ ಎಂದು ಡಿಎಂಕೆ ನಾಯಕ ಸ್ಟ್ಯಾಲಿನ್ ಇತ್ತೀಚೆಗಷ್ಟೇ ರಾಜಕಾರಣಕ್ಕೆ ಪ್ರವೇಶಿಸಿರುವ ರಜಿನಿಕಾಂತ್ ಗೆ ಟಾಂಗ್ ನೀಡಿದ್ದಾರೆ. 
ರಜನಿಕಾಂತ್ ಡಿಎಂಕೆ ನಾಯಕ ಕರುಣಾನಿಧಿ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಸ್ಟ್ಯಾಲಿನ್ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ. ತಮಿಳುನಾಡು ದ್ರಾವಿಡ ಚಳುವಳಿಯ ನಾಡು, ಇಲ್ಲಿ ಆಧ್ಯಾತ್ಮಕ್ಕೆ ಅವಕಾಶವಿಲ್ಲ ಎಂದು ಸ್ಟ್ಯಾಲಿನ್ ಹೇಳಿದ್ದಾರೆ. 
ತಮಿಳುನಾಡು ದ್ರಾವಿಡ ಚಳುವಳಿಯ, ಪೆರಿಯಾರ್ ನ ಭೂಮಿ, ಇಲ್ಲಿನ ರಾಜಕಾರಣದಲ್ಲಿ ಆಧ್ಯಾತ್ಮ ಕೆಲಸ ಮಾಡುವುದಿಲ್ಲ ಎಂದು ಸ್ಟ್ಯಾಲಿನ್ ಅಭಿಪ್ರಾಯಪಟಿದ್ದಾರೆ. ಕರುಣಾನಿಧಿ ಭೇಟಿ ವೇಳೆ ರಜಿನಿಕಾಂತ್ ಡಿಎಂಕೆ ಬೆಂಬಲ ಕೇಳಿದರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಸ್ಟ್ಯಾಲಿನ್ ಅವೆಲ್ಲಾ ಚುನಾವಣೆಯ ಸಂದರ್ಭದಲ್ಲಿ ನಿರ್ಧಾರವಾಗುವ ವಿಷಯಗಳಷ್ಟೇ ಎಂದಿದ್ದಾರೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com