ಬ್ಯಾಂಕರ್'ಗಳನ್ನು ವಿವಾಹವಾಗದಂತೆ ಫತ್ವಾ: ಮುಸ್ಲಿಮರಲ್ಲೇ ಒಡಕು ಎಂದ ಮುಸ್ಲಿಂ ಕಾನೂನು ಮಂಡಳಿ

ಬ್ಯಾಂಕ್ ಉದ್ಯೋಗಸ್ಥರನ್ನು ವಿವಾಹವಾಗದಂತೆ ಫತ್ವಾ ಹೊರಡಿಸಿರುವ ಮೌಲ್ವಿ ದಾರೂಲ್ ಉಲೂಮ್ ಡಿಯೋಬಂದ್ ಅವರ ನಿಲುವಿನ ವಿರುದ್ಧ ಇದೀಗ ಮುಸ್ಲಿಂ ಸಮುದಾಯದಲ್ಲೇ ವಿರೋಧ ವ್ಯಕ್ತವಾಗಲು ಆರಂಭವಾಗಿದೆ...
ಎಐಎಂಪಿಎಲ್'ಬಿ ಕಾರ್ಯನಿರ್ವಾಹಕ ಅಧ್ಯಕ್ಷ ಖಾಲಿದ್ ರಶೀದ್ ಫಿರಂಗಿ ಮಹಾಲಿ
ಎಐಎಂಪಿಎಲ್'ಬಿ ಕಾರ್ಯನಿರ್ವಾಹಕ ಅಧ್ಯಕ್ಷ ಖಾಲಿದ್ ರಶೀದ್ ಫಿರಂಗಿ ಮಹಾಲಿ
ಲಖನೌ: ಬ್ಯಾಂಕ್ ಉದ್ಯೋಗಸ್ಥರನ್ನು ವಿವಾಹವಾಗದಂತೆ ಫತ್ವಾ ಹೊರಡಿಸಿರುವ ಮೌಲ್ವಿ ದಾರೂಲ್ ಉಲೂಮ್ ಡಿಯೋಬಂದ್ ಅವರ ನಿಲುವಿನ ವಿರುದ್ಧ ಇದೀಗ ಮುಸ್ಲಿಂ ಸಮುದಾಯದಲ್ಲೇ ವಿರೋಧ ವ್ಯಕ್ತವಾಗಲು ಆರಂಭವಾಗಿದೆ. 
ದಾರೂಲ್ ಉಲೂಮ್ ಡಿಯೋಬಂದ್ ಹೊರಡಿಸಿರುವ ಪಥ್ವಾಗೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ರೀತಿಯ ಫತ್ವಾ ಮುಸ್ಲಿಮರಲ್ಲೇ ಒಡಕನ್ನುಂಟು ಮಾಡುತ್ತದೆ ಎಂದು ಹೇಳಿದೆ. 
ಈ ಕುರಿತಂತೆ ಮಾತನಾಡಿರುವ ಎಐಎಂಪಿಎಲ್'ಬಿ ಕಾರ್ಯನಿರ್ವಾಹಕ ಅಧ್ಯಕ್ಷ ಖಾಲಿದ್ ರಶೀದ್ ಫಿರಂಗಿ ಮಹಾಲಿಯವರು, ಬ್ಯಾಂಕಿಂಗ್ ವಲಯದಲ್ಲಿ ಹೆಚ್ಚು ಜನ ಮುಸ್ಲಿಮರು ಕೆಲಸ ಮಾಡುತ್ತಿದ್ದಾರೆ. ಬ್ಯಾಂಕಿಂಗ್ ವಲಯದಲ್ಲಿ ಕೆಲಸ ಮಾಡುತ್ತಿರುವವರನ್ನು ವಿವಾಹವಾಗಬಾರದು ಎಂದು ಫತ್ವಾ ಹೊರಡಿಸಿರುವುದು ತಪ್ಪು ಎಂದು ಹೇಳಿದ್ದಾರೆ. 
ಈ ರೀತಿಯ ಫತ್ವಾ ಹೊರಡಿಸಿರುವವರು ಈ ಕುರಿತು ಮರು ಚಿಂತನೆ ನಡೆಸಬೇಕಿದೆ. ಏಕೆಂದರೆ ಇಂತಹ ಫತ್ವಾ ಮುಸ್ಲಿಂ ಸಮಾಜದಲ್ಲೇ ಗೊಂದಲಗಳನ್ನು ಸೃಷ್ಟಿ ಮಾಡಲಿದೆ. ಇಂತಹ ಫತ್ವಾ ಹೊರಡಿಸುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com