"ಸಂಘ ಪರಿವಾರ ಮತ್ತು ಬಿಜೆಪಿ ಸದಸ್ಯರು ನನ್ನ ಹೆಸರನ್ನು ಹಾಳು ಮಾಡಲು ಮತ್ತು ಜನಪ್ರಿಯತೆಯನ್ನು ಕೆಡಿಸಲು ಬಾಲಿಶ ಪ್ರಯತ್ನವನ್ನು ಮಾಡುತ್ತಿದ್ದಾರೆ, ಅದು ಗುಜರಾತ್ ಫಲಿತಾಂಶದ ನಂತರದ ಹೆಚ್ಚಾಗಿದೆ. 2019ರ ಚುನಾವಣೆಗಳ ಬಗೆಗೆ ಅವರು ಭೀತಿಯನ್ನು ಹೊಂದಿದ್ದಾರೆ. ನನ್ನ ಮಾತಿನ ಒಂದೇ ಒಂದು ಪದವೂ ಪ್ರಚೋದನಾಕಾರಿಯಾಗಿರಲಿಲ್ಲ, ನನ್ನ ಮೇಲೆ ವ್ಯಥಾ ದಾಳಿಯಾಗುತ್ತಿದೆ." ನವದೆಹಲಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮೇವಾನಿ ಹೇಳಿದ್ದಾರೆ.