ಆರಂಭದಲ್ಲಿ, ನಾಥ್ವಾನಿ ಕುಟುಂಬವು ಮೆದುಳಿನ ಕಾಯಿಲೆಯಿಂದ ಬಳಲುತ್ತಿದ್ದ ಜಯಶ್ರೀ ಬೆನ್ ತನ್ನ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದರು. ಇದರಿಂದಲೇ ಆಕೆ ಟೆರೇಸ್ ಮೇಲಿನಿಂದ ತಾವಾಗಿ ಬಿದ್ದು ಸತ್ತಿದ್ದಾರೆ ಎಂದು ಹೇಳಿಕೆ ನೀಡಿತ್ತು. ಅದಾಗಿಯೂ ಪೋಲೀಸರು ಇನ್ನೊಂದು ದಿಕ್ಕಿನಿಂದ ತನಿಖೆ ಕೈಗೊಂಡಿದ್ದು, ನಾವು ಅಪಾರ್ಟ್ ಮೆಂಟ್ ನಲ್ಲಿ ಸಿಸಿಟಿವಿಗಳನ್ನು ಅಳವಡಿಸಿದ್ದು ಆ ಸಿಸಿಟಿವಿ ದೃಶ್ಯಗಳಲ್ಲಿ ಸಂದೀಪ್ ತನ್ನ ತಾಯಿ ಜಯಶ್ರೀ ಬೆನ್ ಅವರೊಡನೆ ಮನೆಯ ಟೆರೇಸ್ ಗೆ ಬಂದಿದ್ದದ್ದು ಸ್ಪಷ್ಟವಾಗಿ ದಾಖಲಾಗಿದೆ. ಅಲ್ಲದೆ ನಾವು ಆ ದೃಶ್ಯಗಳ ಮುಂದಿಟ್ಟು ಸಂದೀಪ್ ನ್ನು ಪ್ರಶ್ನಿಸಲು ತಾನು ತನ್ನ ತಾಯಿಯ ಅನಾರೋಗ್ಯಕ್ಕೆ ಬೇಸತ್ತಿದ್ದು ಆ ದಿನ ಟೆರೇಸ್ ಗೆ ಕರೆದೊಯ್ದು ಜಯಶ್ರೀ ಬೆನ್ ಅವರನ್ನು ತಳ್ಲಿದ್ದಾಗಿ ಒಪ್ಪಿದ್ದಾರೆ" ಸೆಕೆಂಡ್ ಝೋನ್ ಡಿಜಿಪಿ ಕರಣ್ ರಾಜ್ ವಾಘೇಲಾ ಹೇಳಿದರು.