ಮಂಜು ಕವಿದ ವಾತಾವರಣ; ದೆಹಲಿಯಲ್ಲಿ ಭೀಕರ ಅಪಘಾತ, 4 ಅಥ್ಲೀಟ್ ಗಳ ಸಾವು

ದೆಹಲಿಯಲ್ಲಿ ಮಂಜು ಕವಿದ ವಾತಾವರಣದಿಂದಾಗಿ ರಸ್ತೆ ಕಾಣದೇ ಕಾರೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ನಾಲ್ಕು ರಾಷ್ಟ್ರ ಮಟ್ಟದ ವೇಟ್ ಲಿಫ್ಟರ್ ಗಳು ದಾರುಣವಾಗಿ ಮೃತರಾಗಿದ್ದಾರೆ.
ಅಪಘಾತಕ್ಕೀಡಾದ ಕಾರು
ಅಪಘಾತಕ್ಕೀಡಾದ ಕಾರು
Updated on
ನವದೆಹಲಿ: ದೆಹಲಿಯಲ್ಲಿ ಮಂಜು ಕವಿದ ವಾತಾವರಣದಿಂದಾಗಿ ರಸ್ತೆ ಕಾಣದೇ ಕಾರೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ನಾಲ್ಕು ರಾಷ್ಟ್ರ ಮಟ್ಟದ ವೇಟ್ ಲಿಫ್ಟರ್ ಗಳು ದಾರುಣವಾಗಿ ಮೃತರಾಗಿದ್ದಾರೆ.
ದೆಹಲಿಯಲ್ಲಿರುವ ದೆಹಲಿ-ಪಾಣಿಪತ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂಜಾನೆ ಈ ದುರ್ಘಟನೆ ಸಂಭವಿಸಿದ್ದು, ಮುಂಜಾನೆ 4 ಗಂಟೆಗೆ ಹರಿಯಾಣ ಮತ್ತು ದಿಲ್ಲಿ ಗಡಿಯಲ್ಲಿರುವ ಅಲಿಪುರ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಅಥ್ಲೀಟ್ ಗಳಿದ್ದ ಸ್ವಿಫ್ಟ್ ಡಿಜೈರ್ ಕಾರು ರಸ್ತೆಯ ಡಿವೈಡರ್ ಗೆ ಢಿಕ್ಕಿ ಹೊಡೆದು ಬಳಿಕ ವಿದ್ಯುತ್ ಕಂಬಕ್ಕೆ ಬಡಿದಿದೆ. ಪರಿಣಾಮ ಕಾರಿನಲ್ಲಿದ್ದ ಅಥ್ಲೀಟ್ ಗಳ ಪೈಕಿ ನಾಲ್ಕು ಮಂದಿ ಸಾವನ್ನಪ್ಪಿದ್ದು, ಇಬ್ಬರು ವಿಶ್ವ ಚಾಂಪಿಯನ್ ವೇಟ್ ಲಿಫ್ಟರ್ ಗಳು ಗಂಭೀರ ಗಾಯಗೊಂಡಿದ್ದಾರೆ. 
ಮೃತಪಟ್ಟ ವೇಟ್ ಲಿಫ್ಟರ್ ಗಳ ಪೈಕಿ ಮೂವರನ್ನು ಗುರುತಿಸಲಾಗಿದ್ದು, ಟಿಕಮ್ ಚಾಂದ್, ಸೌರಬ್, ಯೋಗೇಶ್ ಮತ್ತು ಹರೀಶ್ ರಾಯ್ ಮೃತಪಟ್ಟ ಪವರ್ ಲಿಫ್ಟರ್ ಗಳಾಗಿದ್ದಾರೆ. ಗಾಯಗೊಂಡಿರುವ ವೇಟ್ ಲಿಫ್ಟರ್ ಗಳ ಪೈಕಿ ಒಬ್ಬರು ಸಕ್ಶಮ್ ಯಾದವ್ ಎಂದು ತಿಳಿದು ಬಂದಿದೆ. ಸಕ್ಶಮ್ ಯಾದವ್ 2017ರಲ್ಲಿ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಜಯಿಸಿದ್ದರು. ಅವರನ್ನು ದೆಹಯ ಶಾಲಿಮಾರ್ ಬಾಗ್ ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com