ಇಂದು ವಿಧಾನಸಭೆಯಲ್ಲಿ 2007ರ ಕಾವೇರಿ ನ್ಯಾಯಾಧಿಕರಣದ ತೀರ್ಪಿನ ಕುರಿತು ಮಾತನಾಡಿದ ಪಳನಿಸ್ವಾಮಿ, ತಮಿಳನಾಡಿಗೆ ಸೇರಬೇಕಾದ ಒಟ್ಟು 192 ಟಿಎಂಸಿ ನೀರಿನ ಪೈಕಿ ಕರ್ನಾಟಕ ಈಗಾಗಲೇ 111 ಟಿಎಂಸಿ ನೀರು ಹರಿಸಿದೆ. ಬಾಕಿ ಇರುವ 81 ಟಿಎಂಸಿ ನೀರು ಹರಿಸುವಂತೆ ಕರ್ನಾಟಕ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದರು.