ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎಎಂ ಖಾನ್ ವಿಲ್ಕರ್ ಮತ್ತು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ಬಗ್ಗೆ ಮಹತ್ವದ ಆದೇಶ ನೀಡಿದ್ದು, ವಯಸ್ಕ ಯುವಕ-ಯುವತಿ ಅಂತರ್ಜಾತಿ ವಿವಾಹವಾದರೆ ಅದು ತಪ್ಪಲ್ಲ.. ಅಂತರ್ಜಾತಿ ವಿವಾಹವಾಗಿದ್ದಾರೆ ಎಂಬ ಕಾರಣಕ್ಕೇ ಅವರ ಮೇಲೆ ಹಲ್ಲೆ ಅಥವಾ ಇನ್ನಾವುದೇ ಕ್ರಮಕ್ಕೆ ಮುಂದಾದರೆ ಅದನ್ನು ಕಾನೂನು ಬಾಹಿರ ಚಟುವಟಿಕೆ ಎಂದು ಪರಿಗಣಿಸಲಾಗುತ್ತದೆ. ಅಂತರ್ಜಾತಿ ವಿವಾಹವಾದರು ಎಂಬ ಕಾರಣಕ್ಕೆ ಕಾಪ್, ಪಂಚಾಯಿತಿ, ಸಂಘ ಸಂಸ್ಥೆಗಳು ಅಥವಾ ಬೇರೆ ವ್ಯಕ್ತಿಗಳು ಹಲ್ಲೆ ಮಾಡಬಾರದು ಮತ್ತು ಯಾವೇದೇ ರೀತಿಯ ವ್ಯತಿರಿಕ್ತ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಹೇಳಿದೆ.