ರೈಸಿನಾ ಡೈಲಾಗ್ ಎಂಬ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ನೇತನ್ಯಾಹು, ಬಲಹೀನರು ಉಳಿಯುವುದಿಲ್ಲ, ಬಲಾಢ್ಯರು ಮಾತ್ರ ಉಳಿಯುತ್ತಾರೆ. ಬಲಿಷ್ಠರೊಂದಿಗೆ ಮೈತ್ರಿ ಮಾಡಿಕೊಂಡರೆ ನೀವೂ ಬಲಿಷ್ಠರಾಗಿ ಶಾಂತಿ ಉಳಿಯಲು ಸಾಧ್ಯವಾಗುತ್ತದೆ, ಹೀಗಾಗಿ ನಮಗೆ ನಮ್ಮ ಮೊದಲ ಪ್ರಧಾನಿಯ ಅವಧಿಯಿಂದಲೂ ಕನಿಷ್ಠ ಬಲವನ್ನು ಸಂಪಾದಿಸಿಕೊಳ್ಳುವುದು ಅನಿವಾರ್ಯವಾಯಿತು ಎಂದು ನೇತನ್ಯಾಹು ಹೇಳಿದ್ದಾರೆ.