ಪಲ್ಡಿ ಪ್ರದೇಶದಲ್ಲಿರುವ ವಿಹೆಚ್'ಪಿ ಕಚೇರಿಯನ್ನು ಬಿಟ್ಟ ತೊಗಾಡಿಯಾ ಅವರು, ಬಳಿಕ ಥಲ್ಟೆಜ್ ನಲ್ಲಿರುವ ಘನ್ಶ್ಯಾಮ್ ಚಂದ್ರ ಅವರ ನಿವಾಸಕ್ಕೆ ಬೆಳಗ್ಗೆ 10.30ರ ಸುಮಾರಿಗೆ ತೆರಳಿದ್ದಾರೆ. ಬಳಿಕ ಸಂಜೆವರೆಗೂ ಅವರ ನಿವಾಸದಲ್ಲಿಯೇ ಇದ್ದು, ರಾತ್ರಿ 8.35ಕ್ಕೆ ತೊಗಾಡಿಯಾ ಹಾಗೂ ಚಂದ್ರ ಅವರು ಕಾರಿನಲ್ಲಿ ಸರ್ದಾನಗರಕ್ಕೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಘನ್ಶ್ಯಾಮ್ ಅವರು ಆ್ಯಂಬುಲೆನ್ಸ್ ಗೆ ಕರೆ ಮಾಡಿ, ವ್ಯಕ್ತಿಯೊಬ್ಬು ಪ್ರಜ್ಞೆಯನ್ನು ಕಳೆದುಕೊಂಡಿದ್ದಾರೆಂದು ತಿಳಿಸಿದ್ದಾರೆ.