ಅಗ್ನಿ-5 ಉಡಾವಣೆಗೆ ಉಪಕರಣಗಳು ಬಂದಿದ್ದು ತಮಿಳುನಾಡಿನಿಂದ: ನಿರ್ಮಲಾ ಸೀತಾರಾಮನ್

ಭಾರತದ ಅತ್ಯಂತ ದೂರಗಾಮಿ ಅಣ್ವಸ್ತ್ರ ಕ್ಷಿಪಣಿ ಎಂದೇ ಖ್ಯಾತಿಗಳಿಸಿರುವ "ಅಗ್ನಿ-5" ಕ್ಷಿಪಣೆ ಪರೀಕ್ಷೆ ಯಶಸ್ವಿಯಾಗಿದ್ದು, ಅಗ್ನಿ-5 ಯಶಸ್ವಿ ಉಡಾವಣೆಗೆ ತಮಿಳುನಾಡು ರಾಜ್ಯ ಮಹತ್ವದ ಪಾತ್ರ ವಹಿಸಿದೆ.
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
Updated on
ನವದೆಹಲಿ: ಭಾರತದ ಅತ್ಯಂತ ದೂರಗಾಮಿ ಅಣ್ವಸ್ತ್ರ ಕ್ಷಿಪಣಿ ಎಂದೇ ಖ್ಯಾತಿಗಳಿಸಿರುವ "ಅಗ್ನಿ-5" ಕ್ಷಿಪಣೆ ಪರೀಕ್ಷೆ ಯಶಸ್ವಿಯಾಗಿದ್ದು, ಅಗ್ನಿ-5 ಯಶಸ್ವಿ ಉಡಾವಣೆಗೆ ತಮಿಳುನಾಡು ರಾಜ್ಯ ಮಹತ್ವದ ಪಾತ್ರ ವಹಿಸಿದೆ.
ಅಗ್ನಿ-5 ಉಡಾವಣೆಗೆ ಬಳಕೆ ಮಾಡಲಾಗಿದ್ದ ಉಪಕರಣಗಳು ತಮಿಳುನಾಡಿನದ್ದಾಗಿತ್ತು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. " ಅಗ್ನಿ-5 ಪರೀಕ್ಷಾರ್ಥ ಉಡಾವಣೆಗೆ ಬಳಕೆ ಮಾಡಲಾದ ಅನೇಕ ಉಪಕರಣಗಳು ತಮಿಳುನಾಡಿನದ್ದಾಗಿತ್ತು" ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 
ಅಗ್ನಿ-5 ಪರೀಕ್ಷೆ ಯಶಸ್ವಿಯಾಗಿರುವುದಕ್ಕೆ ಆಮದು ಮಾಡಿಕೊಂಡಿರುವ ಉಪಕರಣಗಳು ಮಾತ್ರವಷ್ಟೇ ಸಹಕಾರಿಯಾಗಿಲ್ಲ, ಡಿಆರ್ ಡಿಒ ಕೈಗೆತ್ತಿಕೊಂಡಿದ್ದ ಸಂಶೋಧನಾ ಚಟುವಟಿಕೆಗಳೂ ಸಹ ಮುಖ್ಯವಾಗಿದೆ, ಉಪಕರಣಗಳ ಜೋಡಣೆ ಯಶಸ್ವಿಯಾಗಿದ್ದು ಪರೀಕ್ಷೆಯೂ ಯಶಸ್ವಿಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com