ಈ ಬಗ್ಗೆ ಟ್ವೀಟ್ ಮಾಡಿರುವ ಕೇಜ್ರಿವಾಲ್, ನೀವು ಸತ್ಯ ಮತ್ತು ಪ್ರಾಮಾಣಿಕ ನಡೆವಾಗ ಯಾವಾಗಲು ಅಡ್ಡಿ-ಆತಂಕಗಳು ಎದುರಾಗುತ್ತವೆ.. ಅದು ಸಾಮಾನ್ಯ.. ಆದರೆ ಅಷ್ಟಕ್ಕೇ ಹೆದರಿ ನಮ್ಮ ಪ್ರಾಮಾಣಿಕತೆಯನ್ನು ಕೈಬಿಡಬಾರದು. ನಿಮ್ಮಲ್ಲಿ ಸತ್ಯವಿದ್ದಾಗ ಪ್ರಪಂಚದ ಎಲ್ಲ ಅದೃಶ್ಯ ಶಕ್ತಿಗಳು ನಿಮಗೆ ಸಹಾಯ ಮಾಡುತ್ತವೆ. ದೇವರು ಕೂಡ ನಿಮಗೆ ಸಾಥ್ ನೀಡುತ್ತಾನೆ. ನೀವು ದೇಶ ಮತ್ತು ಸಮಾಜಕ್ಕಾಗಿ ಕೆಲಸ ಮಾಡುತ್ತಿದ್ದು, ಅಂತಿಮವಾಗಿ ಗೆಲುವು ನಿಮ್ಮದೇ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.