ಈ ಬಗ್ಗೆ ಟ್ವೀಟ್ ಮಾಡಿರುವ ದೀದೀ, ಇದೊಂದು ಕೇಂದ್ರ ಸರ್ಕಾರದ ಷಡ್ಯಂತ್ರ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ. ಕೇಂದ್ರ ಸರಕಾರ ರಾಜಕೀಯ ಹಗೆತನಕ್ಕೆ ಸಾಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದ್ದು, ಇದಕ್ಕೆ ದೆಹಲಿಯ ಆಪ್ ಶಾಸಕರ ಅನರ್ಹತೆ ಶಿಫಾರಸು ಒಂದು ತಾಜಾ ನಿದರ್ಶನ. ಈ ವಿಚಾರದಲ್ಲಿ ಕೇಜ್ರಿವಾಲ್ ಮತ್ತವರ ಪಕ್ಷದ ಶಾಸಕರ ಪರ ನಾನು ನಿಲ್ಲುತ್ತೇನೆ. ಕೇಂದ್ರದ ಎನ್ ಡಿಎ ಸರ್ಕಾರ ತತ್ವಾದರ್ಶಗಳನ್ನು ಮೂಲೆಗುಂಪು ಮಾಡಿ ಸಾಮಾನ್ಯ ನ್ಯಾಯಕ್ಕೆ ಧಕ್ಕೆಯುಂಟು ಮಾಡುತ್ತಿದೆ. ಮೋದಿ ಸರ್ಕಾರದ ದುರಾಡಳಿತದ ವಿರುದ್ದ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದ್ದಾರೆ.