ಅತ್ತ 20 ಆಪ್ ಶಾಸಕರ ಅನರ್ಹಗೊಳಿಸುವ ಚುನಾವಣಾ ಆಯೋಗದ ವರದಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕಿದ ಬೆನ್ನಲ್ಲೇ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರ ಮತ್ತು ಚುನಾವಣಾ ಆಯೋಗ ಉದ್ದೇಶಪೂರ್ವಕವಾಗಿಯೇ ಶಾಸಕರ ಅನರ್ಹತೆಯನ್ನು ವಿಳಂಬ ಮಾಡಿತು ಎಂದು ಆರೋಪಿಸಿದೆ. ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಪಕ್ಷದ ಮುಖಂಡ ಅಜಯ್ ಮಕೇನ್ ಅವರು, ರಾಜ್ಯಸಭೆ ಚುನಾವಣೆಗಾಗಿ ಆಪ್ ಶಾಸಕರ ಅನರ್ಹತೆಯನ್ನು ಬಿಜೆಪಿ ಸರ್ಕಾರ 3 ವಾರಗಳ ಮುಂದೂಡಿತು ಎಂದು ಹೇಳಿದ್ದಾರೆ.