ಸತತ ನಾಲ್ಕನೇ ದಿನವೂ ಪಾಕಿಸ್ತಾನ ಸೇನೆ ಶೆಲ್ ದಾಳಿ ನಡೆಸಿದ್ದು, ಶೆಲ್ ದಾಳಿಯಿಂದಾಗಿ ಭಾರತದ ಗಡಿಯಲ್ಲಿರುವ ಗ್ರಾಮಗಳ ನೂರಾರು ಮನೆಗಳಿಗೆ ಹಾನಿಯಾಗಿದೆ. ಗಡಿಯಲ್ಲಿ ಇದೀಗ ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ವರೆಗೂ ಸುಮಾರು 10 ಸಾವಿರಕ್ಕೂ ಅಧಿಕ ಗಡಿ ಗ್ರಾಮಸ್ಥರನ್ನು ಸ್ಥಳಾಂತರ ಮಾಡಲಾಗಿದೆ. ಅಂತೆಯೇ ಕಳೆದ ಗುರುವಾರದಿಂದ ಆರಂಭವಾಗ ಕದನ ವಿರಾಮ ಉಲ್ಲಂಘನೆ ಇಂದೂ ಮುಂದುವರೆದಿದ್ದು, ಪಾಕ್ ಸೈನಿಕರ ಗುಂಡಿನ ದಾಳಿಯಲ್ಲಿ ಈ ವರೆಗೂ ಯೋಧರೂ ಸೇರಿದಂತೆ 12 ಮಂದಿ ಸಾವಿಗೀಡಾಗಿದ್ದು, 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.