ಬಳಿಕ ನಡೆದ ಟ್ಯಾಬ್ಲೋಗಳ ಪ್ರದರ್ಶನದಲ್ಲಿ ಅಸ್ಸಾಂ ಸಾಂಸ್ಕೃತಿಕ ಸಂಪ್ರದಾಯ ಬಿಂಬಿಸುವ ಟ್ಯಾಬ್ಲೋ, ಛತ್ರಪತಿ ಶಿವಾಜಿ ಕುರಿತ ಮಹಾರಾಷ್ಟ್ರ ಸರ್ಕಾರದ ಟ್ಯಾಬ್ಲೋ, ಕರ್ನಾಟಕದ ಅರಣ್ಯ ಸಂಪತ್ತನ್ನು ಬಿಂಬಿಸುವ ಟ್ಯಾಬ್ಲೋಗಳು ಪಂಥಸಂಚಲನದಲ್ಲಿ ಸಾಗಿದವು. ಪ್ರಮುಖವಾಗಿ ಮನ್ಕೀ ಬಾತ್, ಕರ್ನಾಟಕದ ವನ್ಯಜೀವಿ, ಐಟಿಬಿಪಿ ಸೇರಿ 23 ಟ್ಯಾಬ್ಲೋ ಪ್ರದರ್ಶನ, ನೋಟು ನಿಷೇಧದ ಬಳಿಕ ಕಪ್ಪು ಹಣದ ವಿರುದ್ಧ ಸಮರದ ಕುರಿತು ಮಾಹಿತಿ ನೀಡುವ ಟ್ಯಾಬ್ಲೋಗಳು ಕೂಡ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದವು.