ರಾಜ್ಯ ಸರ್ಕಾರವು ಈಗಾಗಲೇ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದ್ದು ಅಪಘಾತದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ಐದು ಲಕ್ಷ, ತೀವ್ರ ಸ್ವರೂಪದ ಗಾಯವಾದವರಿಗೆ ಒಂದು ಲಕ್ಷ ಹಾಗೂ ಇತರೆ ಸಣ್ಣ ಪುಟ್ಟ ಗಾಯಗಾಳಾದವರಿಗೆ 50,000 ರೂ. ಪರಿಹಾರ ವಿತರಣೆಗೆ ಸಿದ್ದ ಎಂದಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಸ್ ಉರುಳಿ ಬಿದ್ದ ಸೇತುವೆಯ ತಪಾಸಣೆಗೆ ಆದೇಶಿಸಿದ್ದಾರೆ. ಬಸ್ ಅಪಗಾತದ ನಂತರ ವಾಹನ ಚಾಲನೆ ಮಾಡುವಾಗ ಮೊಬೈಲ್ ಗಳನ್ನು ಬಳಸುವ ರಾಜ್ಯ ಸರ್ಕಾರಿ ಬಸ್ಸುಗಳ ಚಾಲಕರನ್ನು ನಿಷೇಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.