ಕಾಶ್ಮೀರದಲ್ಲಿ ಉಗ್ರರ ಪ್ರಮುಖ ನೆಲೆಗಳನ್ನು ಶಾಶ್ವತವಾಗಿ ನಿರ್ನಾಮ ಮಾಡುವುದು, ಸೇನೆಗೆ ಆತ್ಮಸ್ಥೈರ್ಯ ತುಂಬುವುದು, ಉಗ್ರರ ವಿರುದ್ಧ ಕಾರ್ಯಾಚರಣೆ ಎನ್ ಐಎ, ಗುಪ್ತಚರ ಇಲಾಖೆಗಳಿಗೆ ಶಕ್ತಿ ತುಂಬುವುದು ನಮ್ಮ ಗುರಿಯಾಗಿತ್ತು. ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿರುವ ವ್ಯಕ್ತಿಗಳ ಮಟ್ಟಹಾಕಬೇಕಿತ್ತು. ಈ ಎಲ್ಲ ಕಾರ್ಯಗಳು ಪೂರ್ಣವಾದ ಹಿನ್ನಲೆಯಲ್ಲಿ ಸರ್ಕಾರದಿಂದ ಹೊರಬಂದು ಅಧಿಕಾರ ತ್ಯಾಗ ಮಾಡಿದೆವು ಎಂದು ಹೇಳಿದ್ದಾರೆ.