ನವದೆಹಲಿ: ಜಾಹೀರಾತು ಕಂಪನಿಗೆ ಬಾಕಿ ಹಿಂದಿರುಗಿಸದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೂಪರ್ ಸ್ಟಾರ್ ರಜನಿ ಕಾಂತ್ ಅವರ ಪತ್ನಿ ಲತಾ ಅವರನ್ನು ಸುಪ್ರೀಂಕೋರ್ಟ್ ಇಂದು ತರಾಟೆಗೆ ತೆಗೆದುಕೊಂಡಿತು.
ಜಾಹಿರಾತು ಕಂಪನಿಗೆ ಲತಾ ರಜನಿಕಾಂತ್ ಏಕೆ 6. 20 ಕೋಟಿ ರೂಪಾಯಿಯನ್ನು ಹಿಂತಿರುಗಿಸುತ್ತಿಲ್ಲ ಎಂದು ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.
ಕೊಚಡೈಯ್ಯನ್ ಚಿತ್ರದ ಹಕ್ಕು ಮಾರಾಟಕ್ಕೆ ಸಂಬಂಧಿಸಿದಂತೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಪತ್ನಿ ಲತಾ ರಜನಿಕಾಂತ್ ಹಾಗೂ ಆಡ್ ಬ್ಯೂರೊ ಮಿಡಿಯಾ ಒನ್ ಗ್ಲೋಬಲ್ ಎಂಟರ್ ಟೈನ್ ಮೆಂಟ್ ರಂಪನಿ ನಡುವಿನ ಪ್ರಕರಣ ಇದಾಗಿದೆ.
ಖಾಸಗಿ ಕಂಪನಿಯಾದ ಆಡ್ ಬ್ಯೂರೊ ಕಂಪನಿಗೆ 6.20 ಕೋಟಿ ರೂ. ಹಣವನ್ನು ಬಡ್ಡಿ ಸಮೇತ ಹನ್ನೆರಡು ವಾರಗಳೊಳಗೆ ಪಾವತಿಸುವಂತೆ ಸುಪ್ರೀಂ ಕೋರ್ಟ್ ಫೆಬ್ರವರಿ 20 ರಂದು ಆದೇಶಿಸಿತ್ತು
Advertisement