ಜಾಹೀರಾತು ಕಂಪನಿಗೆ ಬಾಕಿ ಹಿಂದಿರುಗಿಸದ ರಜನಿ ಪತ್ನಿಗೆ ಸುಪ್ರೀಂ ತರಾಟೆ

ಜಾಹೀರಾತು ಕಂಪನಿಗೆ ಬಾಕಿ ಹಿಂದಿರುಗಿಸದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೂಪರ್ ಸ್ಟಾರ್ ರಜನಿ ಕಾಂತ್ ಅವರ ಪತ್ನಿ ಲತಾ ಅವರನ್ನು ಸುಪ್ರೀಂಕೋರ್ಟ್ ಇಂದು ತರಾಟೆಗೆ ತೆಗೆದುಕೊಂಡಿತು.
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
Updated on

ನವದೆಹಲಿ: ಜಾಹೀರಾತು ಕಂಪನಿಗೆ ಬಾಕಿ ಹಿಂದಿರುಗಿಸದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೂಪರ್ ಸ್ಟಾರ್ ರಜನಿ ಕಾಂತ್ ಅವರ ಪತ್ನಿ ಲತಾ ಅವರನ್ನು ಸುಪ್ರೀಂಕೋರ್ಟ್ ಇಂದು ತರಾಟೆಗೆ ತೆಗೆದುಕೊಂಡಿತು.

ಜಾಹಿರಾತು ಕಂಪನಿಗೆ ಲತಾ ರಜನಿಕಾಂತ್ ಏಕೆ 6. 20 ಕೋಟಿ ರೂಪಾಯಿಯನ್ನು ಹಿಂತಿರುಗಿಸುತ್ತಿಲ್ಲ ಎಂದು ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.

ಕೊಚಡೈಯ್ಯನ್ ಚಿತ್ರದ ಹಕ್ಕು ಮಾರಾಟಕ್ಕೆ ಸಂಬಂಧಿಸಿದಂತೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಪತ್ನಿ ಲತಾ ರಜನಿಕಾಂತ್  ಹಾಗೂ ಆಡ್  ಬ್ಯೂರೊ ಮಿಡಿಯಾ ಒನ್   ಗ್ಲೋಬಲ್ ಎಂಟರ್ ಟೈನ್ ಮೆಂಟ್  ರಂಪನಿ ನಡುವಿನ ಪ್ರಕರಣ ಇದಾಗಿದೆ.

ಖಾಸಗಿ ಕಂಪನಿಯಾದ ಆಡ್ ಬ್ಯೂರೊ ಕಂಪನಿಗೆ   6.20 ಕೋಟಿ ರೂ. ಹಣವನ್ನು ಬಡ್ಡಿ ಸಮೇತ  ಹನ್ನೆರಡು ವಾರಗಳೊಳಗೆ ಪಾವತಿಸುವಂತೆ ಸುಪ್ರೀಂ ಕೋರ್ಟ್ ಫೆಬ್ರವರಿ 20 ರಂದು ಆದೇಶಿಸಿತ್ತು

ಕೊಚಡೈಯ್ಯನ್ ಚಿತ್ರದ ನಿರ್ಮಾಣ ನಂತರದ ಕೆಲಸಕ್ಕೆ ನೆರವಾಗಲು ಮತ್ತು ಚಲನಚಿತ್ರವನ್ನು ಪೂರ್ಣಗೊಳಿಸಲು 10 ಕೋಟಿ ರೂ. ಸಾಲ ನೀಡಿರುವುದಾಗಿ ಆರೋಪಿಸಿ 2016 ರಲ್ಲಿ ಆಡ್ ಬ್ಯೂರೊ ಕಂಪನಿ ಅರ್ಜಿ ಸಲ್ಲಿಸಿತ್ತು.
ಆದಾಗ್ಯೂ, ಮಿಡಿಯಾ ಒನ್ ನಿರ್ದೇಶಕಿಯಾಗಿದ್ದ ಲತಾ ರಜನಿಕಾಂತ್ ಅವರು, ಆಡ್ ಬ್ಯೂರೋವನ್ನು ಸಂಪರ್ಕಿಸದೆ ಇರೋಸ್ ಇಂಟರ್ ನ್ಯಾಷನಲ್ ಗೆ  ತಮಿಳುನಾಡು ವಿತರಣಾ ಹಕ್ಕುಗಳನ್ನು ಮಾರಾಟ ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com