ಅಮರನಾಥ್ ಯಾತ್ರೆ ವೇಳೆ ಮೂವರು ಯಾತ್ರಾರ್ಥಿಗಳು ಸಾವು

ಅಮರನಾಥ್ ಯಾತ್ರೆ ವೇಳೆ ವಿವಿಧ ಕಾರಣಗಳಿಂದ ಆಂಧ್ರ ಪ್ರದೇಶ ಇಬ್ಬರು ಸೇರಿ ಮೂವರು ಯಾತ್ರಾರ್ಥಿಗಳು ಮೃತಪಟ್ಟಿದ್ದು,...
ಮೊದಲ ಬ್ಯಾಚ್ ನ ಯಾತ್ರಾರ್ಥಿಗಳು
ಮೊದಲ ಬ್ಯಾಚ್ ನ ಯಾತ್ರಾರ್ಥಿಗಳು
ಶ್ರೀನಗರ: ಅಮರನಾಥ್ ಯಾತ್ರೆ ವೇಳೆ ವಿವಿಧ ಕಾರಣಗಳಿಂದ ಆಂಧ್ರ ಪ್ರದೇಶ ಇಬ್ಬರು ಸೇರಿ ಮೂವರು ಯಾತ್ರಾರ್ಥಿಗಳು ಮೃತಪಟ್ಟಿದ್ದು, ಇದರೊಂದಿಗೆ ಯತ್ರಾರ್ಥಿಗಳ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.
ಮೃತರು ಆಂಧ್ರದ ತೋಟ ರಧನಮ್(75) ಅವರು ಇಂದು ಬೆಳಗ್ಗೆ ಬಾಲ್ಟಲ್ ಬೇಸ್ ಕ್ಯಾಂಪ್ ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆಂಧ್ರ ಪ್ರದೇಶದ ಅನಂತಪೋರದ ರಾಧಾಕೃಷ್ಣ ಶಾಸ್ತ್ರಿ(65) ಅವರು ಅಮರನಾಥ್ ಗುಹೆ ಸಮೀಪದ ಸಂಗಮದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಇನ್ನು ಯಾತ್ರೆ ವೇಳೆ ಶೂಟಿಂಗ್ ಕಲ್ಲು ಬಡಿದು ಗಂಭೀರವಾಗಿ ಗಾಯಗೊಂಡಿದ್ದ  ಉತ್ತರಖಂಡ್ ದ ಮತ್ತೊಬ್ಬ ಯಾತ್ರಿ ಪುಷ್ಕರ್ ಜೋಶಿ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com