ರಾಯ್ಪುರ್(ಛತ್ತೀಸ್ ಘರ್): ಛತ್ತೀಸ್ ಘರ್ ದಂತೇವಾಡಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ನಲ್ಲಿ ಮೂವರು ನಕ್ಸಲರು ಸಾವನ್ನಪ್ಪಿದ್ದಾರೆ.
ರಾಜಧಾನಿ ರಾಯ್ಪುರ್ ನಿಂದ ಸುಮಾರು 450 ಕಿಮೀ ದೂರದಲ್ಲಿರುವ ದಂತೇವಾಡದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಜಿಲ್ಲೆಯ ರಿಸರ್ವ್ ಗಾರ್ಡ್ (ಡಿಆರ್ ಜಿ) ಜವಾನ ಸಹ ಗಾಯಗೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಠೆಕಲ್ಯಾಣ್ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಡಿಆರ್ ಜೆ ಹಾಗು ಜಿಲ್ಲಾ ರಕ್ಷಣಾ ದಲ ಜಂಟಿಯಾಗಿ ಭಾಗವಹಿಸಿದ್ದವು.
ನಕ್ಸಲರ ಮೃತದೇಹಗಳು ಜತೆಗೆ ಮೂರು ಆಯುಧಗಳನ್ನು ಸಹ ಭದ್ರತಾಪಡೆ ವಶಕ್ಕೆ ಪಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.