ದೇಶ
ಸಲಿಂಗಕಾಮ ಸಹಜವಾದುದ್ದಲ್ಲ, ಅದು ಹಿಂದುತ್ವಕ್ಕೆ ವಿರೋಧ: ಸುಬ್ರಮಣಿಯನ್ ಸ್ವಾಮಿ
ಸಲಿಂಗಕಾಮ ಸಂಬಂಧ ಸುಪ್ರಿಂಕೋರ್ಟ್ ಇಂದು ಮಹತ್ವದ ತೀರ್ಪು ನೀಡಲಿದೆ,.ಇದರ ಬೆನ್ನೆಲ್ಲೇ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ, ಸಲಿಂಗ ಕಾಮ ...
ನವದೆಹಲಿ: ಸಲಿಂಗಕಾಮ ಸಂಬಂಧ ಸುಪ್ರಿಂಕೋರ್ಟ್ ಇಂದು ಮಹತ್ವದ ತೀರ್ಪು ನೀಡಲಿದೆ,.ಇದರ ಬೆನ್ನೆಲ್ಲೇ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ, ಸಲಿಂಗ ಕಾಮ ಸಹಜವಾದದ್ದಲ್ಲ, ಅದು ಹಿಂದುತ್ವಕ್ಕೆ ವಿರೋಧವಾದದ್ದು ಎಂದು ಹೇಳಿದ್ದಾರೆ.
ಈ ಸಂಬಂಧ ದೇಶವು ವೈದ್ಯಕೀಯ ಸಂಶೋಧನೆ ನಡೆಸಿ ಅದನ್ನು ವಾಸಿ ಮಾಡಬಹುದೇ ಎಂಬ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ, ಅದೊಂದುಸಹಜ ಕ್ರಿಯೆಯಲ್ಲಿ, ಹೀಗಾಗಿ ನಾವು ಸಂಭ್ರಮಿಸುವುದರಲ್ಲಿ ಅರ್ಥವಿಲ್ಲ ಎಂದು ತಿಳಿಸಿದ್ದಾರೆ.
2013 ರಲ್ಲಿ ಸುಪ್ರೀಂ ಕೋರ್ಟ್ ಸಲಿಂಗಿಗಳ ನಡುವಿನ ಲೈಂಗಿಕತೆ ಅಪರಾಧ ಎಂದು ತೀರ್ಪು ನೀಡಿತ್ತು.. ಸಲಿಂಗಕಾಮ ಅಪರಾಧ ಎನ್ನುವ ಕುರಿತ ತೀರ್ಪಿನ ಮರುಪರಿಶೀಲನೆಯ ಅಂತಿಮ ತೀರ್ಪು ಇಂದು ಹೊರ ಬೀಳಲಿದೆ.