ಕೇರಳ: ಪೊಲೀಸರೆದುರು ಶರಣಾದ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದ ಪಾದ್ರಿ

ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದ ಮಲಂಗಾ ಸಿರಿಯನ್ ಆರ್ಥೋಡಾಕ್ಸ್ ನ ಮೂವರು ಪಾದ್ರಿಗಳ ಪೈಕಿ ಓರ್ವ ಪಾದ್ರಿ ಪೊಲೀಸರೆದುರು ಶರಣಾಗಿದ್ದಾರೆ.
ಕೇರಳ: ಪೊಲೀಸರೆದುರು ಶರಣಾದ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದ ಪಾದ್ರಿ
ಕೇರಳ: ಪೊಲೀಸರೆದುರು ಶರಣಾದ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದ ಪಾದ್ರಿ
Updated on
ತಿರುವನಂತಪುರಂ: ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದ ಮಲಂಗಾ ಸಿರಿಯನ್ ಆರ್ಥೋಡಾಕ್ಸ್ ನ ಮೂವರು ಪಾದ್ರಿಗಳ ಪೈಕಿ ಓರ್ವ ಪಾದ್ರಿ ಪೊಲೀಸರೆದುರು ಶರಣಾಗಿದ್ದಾರೆ. 
ಪ್ರಕರಣದ ಎರಡನೇ ಆರೋಪಿ ಫಾದರ್ ಜಾಬ್ ಮ್ಯಾಥ್ಯೂ ಸಿಸಿಬಿ ಪೊಲೀಸರೆದುರು ಶರಣಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪಾದ್ರಿಗಳ ನಿರೀಕ್ಷಣಾ ಜಾಮೀನನ್ನು ಕೇರಳ ಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ ಪಾದ್ರಿಗಳು ಶರಣಾಗಿದ್ದಾರೆ. 
ಅಬ್ರಾಹಂ ವರ್ಗೀಸ್ ಅಲಿಯಾಸ್ ಸೋನಿ, ಜಾಬ್ ಮ್ಯಾಥ್ಯೂ ಮತ್ತು ಜೇಸ್ ಕೆ ಜಾರ್ಜ್ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಮಹಿಳೆಯ ಪರಿಸ್ಥಿತಿಯನ್ನು ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಹೇಳಿದ್ದ ಕೋರ್ಟ್ ನಿರೀಕ್ಷಣಾ ಜಾಮೀನನ್ನು ನಿರಾಕರಿಸಿತ್ತು. 
ತನ್ನ ಪತ್ನಿಯ ಪರಿಸ್ಥಿತಿಯನ್ನು ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಪಾದ್ರಿಗಳು ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಕಳೆದ ತಿಂಗಳು ಮಹಿಳೆಯ ಪತಿ ದೂರು ದಾಖಲಿಸಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com