ರ್ಯಾಲಿ ಆರಂಭವಾಗಾದ, ಪ್ರಧಾನಿ ಮೋದಿಯವರು ಜನತೆಯನ್ನುದ್ದೇಶಿ ಮಾತನಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಮೇಲ್ಚಾವಣಿ ನೆರೆದಿದ್ದ ಜನರ ಮೇಲೆ ಬಿದ್ದಿದೆ. ಕೂಡಲೇ ಭಾಷಣವನ್ನು ನಿಲ್ಲಿಸಿದ ಮೋದಿಯವರು ಹುಷಾರಾಗಿರುವಂತೆ ಜನರಿಗೆ ತಿಳಿಸಿದರು, ಅಲ್ಲದೆ, ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಸೂಚಿಸುತ್ತಿದ್ದರು. ಸಮಾವೇಶ ನೋಡುವ ಸಲುವಾಗಿ ಮೇಲ್ಚಾವಣಿಗಳ ಮೇಲೆ ನಿಂತಿದ್ದ ಜನರನ್ನು ಕೆಳಗಿಳಿಯುವಂತೆ ಮನವಿ ಮಾಡಿಕೊಳ್ಳುತ್ತಿದ್ದರು. ಭಯಪಡಬೇಡಿ, ಓಡಬೇಡಿ ಎಂದು ತಿಳಿಸುತ್ತಿದ್ದರು.