ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಕಾಸ್ಗಂಜ್ ಹೆಚ್ಚುವರಿ ಪೋಲಿಸ್ ಅಧೀಕ್ಷಕ ಪವಿತ್ರ ಮೋಹನ್ ತ್ರಿಪಾಠಿ ಅವರು, ಮೆರವಣಿಗೆ ನಡೆಸುವಾಗ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ವಿವಾಹ ಸಮಾರಂಭ ಮುಕ್ತಾಯವಾಗುವವರೆಗೆ ನಾವು ಸಾಕಷ್ಟು ಪೋಲಿಸ್ ಸಿಬ್ಬಂಧಿಯನ್ನು ನಿಯೋಜಿಸಿದ್ದೇವೆ. ಮದುವೆಯ ಬಳಿಕ ನಮ್ಮ ಸಿಬ್ಬಂದಿ ಗ್ರಾಮದಲ್ಲಿ ಎಚ್ಚರಿಕೆ ವಹಿಸಿರುವುದರಿಂದ ಅನಿರೀಕ್ಷಿತ ಘಟನೆಗಳನ್ನು ತಡೆಯಲಿದ್ದಾರೆ ಎಂದಿದ್ದಾರೆ.