ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆ, ಪ್ರಚಾರ ಗಿಟ್ಟಿಸುವ ಹುನ್ನಾರ- ಬಿಜೆಪಿ ಮುಖಂಡ

ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ತನ್ನ ಮೇಲಿನ ಹಲ್ಲೆ ಪ್ರಕರಣವನ್ನು ಬೆಳಕಿಗೆ ತರುವ ಮೂಲಕ ಪ್ರಚಾರ ಗಿಟ್ಟಿಸುವ ಹುನ್ನಾರ ನಡೆಸುತ್ತಿದ್ದಾರೆ ಜಾರ್ಖಂಡ್ ನ ಬಿಜೆಪಿ ಮುಖಂಡ ಚಂದ್ರೇಶ್ವರ್ ಪ್ರಸಾದ್ ಸಿಂಗ್ ಆರೋಪಿಸಿದ್ದಾರೆ.
ಚಂದ್ರೇಶ್ವರ್ ಪ್ರಸಾದ್ ಸಿಂಗ್
ಚಂದ್ರೇಶ್ವರ್ ಪ್ರಸಾದ್ ಸಿಂಗ್
Updated on

ರಾಂಚಿ : ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ತನ್ನ ಮೇಲಿನ ಹಲ್ಲೆ ಪ್ರಕರಣವನ್ನು ಬೆಳಕಿಗೆ ತರುವ ಮೂಲಕ ಪ್ರಚಾರ ಗಿಟ್ಟಿಸುವ  ಹುನ್ನಾರ ನಡೆಸುತ್ತಿದ್ದಾರೆ  ಜಾರ್ಖಂಡ್ ನ ಬಿಜೆಪಿ ಮುಖಂಡ ಚಂದ್ರೇಶ್ವರ್ ಪ್ರಸಾದ್ ಸಿಂಗ್ ಆರೋಪಿಸಿದ್ದಾರೆ.

ಸ್ವಾಮಿ ಅಗ್ನಿವೇಶ್ ಅವರಿಗೆ   ವೇದಿಕೆ ಮೇಲೆ  ಹಲ್ಲೆ ನಡೆಸುವ ವಿಚಾರ ಮೊದಲೇ ಅವರಿಗೆ ಗೊತಿತ್ತು.  ಪ್ರಚಾರಕ್ಕಾಗಿ ಈ ರೀತಿಯ ವ್ಯವಸ್ಥಿತ ಷಢ್ಯಂತ್ರ ನಡೆಸಲಾಗಿದೆ ಎಂದು ಅವರು ಟೀಕಿಸಿದ್ದಾರೆ.

ವಿದೇಶಿ ಹಣವನ್ನು ಸಂರಕ್ಷಿಸುತ್ತಿರುವ ಸ್ವಾಮಿ ಅಗ್ನಿವೇಶ್ ಭಾರತದ ಸಂಸ್ಕೃತಿಯನ್ನು ನಾಶಪಡಿಸುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆ ನಡೆದ್ದರೆ, ವೇದಿಕೆ ಮೇಲೆ ನಡೆದ ಹಲ್ಲೆಗಾಗಿ ಸ್ವಾಮಿ ಅಗ್ನಿವೇಶ್ ಹಾಗೂ ಅವರ ಕಡೆಯವರು ಎಷ್ಟು ಹಣ ಖರ್ಚು ಮಾಡಿದ್ದರು ಎಂಬುದು ಬಹಿರಂಗವಾಗಲಿದೆ ಎಂದು ಸಿಂಗ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಕೇಸರಿ ಬಟ್ಟೆ ತೊಟ್ಟಿರುವ ಸ್ವಾಮಿ ಅಗ್ನಿವೇಶ್  ವಂಚಕ , ಸ್ವಾಮಿ ಅಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾರ್ಖಂಡ್  ನ ಪಕೂರ್  ಜಿಲ್ಲೆಯಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಿ ನಿರ್ಗಮಿಸುವಾಗ ಸ್ವಾಮಿ ಅಗ್ನಿವೇಶ್ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಆದರೆ, ಆ ಕಾರ್ಯಕರ್ತರು  ನಮ್ಮ ಪಕ್ಷದ ಕಾರ್ಯಕರ್ತರಲ್ಲ ಎಂದು ಬಿಜೆಪಿ ಹೇಳಿಕೆ ನೀಡಿದೆ.

 ಈ ಘಟನೆ ನಂತರ ಸ್ವಾಮಿ ಅಗ್ನಿವೇಶ್ ಅವರಿಗೆ ಜಾರ್ಖಂಡ್ ರಾಜ್ಯಸರ್ಕಾರದಿಂದ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ರಘುಬರ್ ದಾಸ್  ಪೊಲೀಸರಿಗೆ ಸೂಚನೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com