ಹಲ್ಲೆಗೊಳಗಾಗಿದ್ದ ಸಂತ್ರಸ್ತ ಮೃತಪಟ್ಟಿದ್ದು ಪೊಲೀಸರ ನಿರ್ಲಕ್ಷ್ಯದಿಂದಲೇ ಎಂದು ಅಲ್ಪಸಂಖ್ಯಾತ ರಾಷ್ಟ್ರೀಯ ಆಯೋಗ ಅಸಮಾಧಾನ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳಿಂದ ಈ ಘಟನೆ ಬಗ್ಗೆ ಸಂಪೂರ್ಣ ವರದಿ ಕೇಳಿದೆ. ರಕ್ಬರ್ ಖಾನ್ ಎಂಬಾತ ಸಾಮೂಹಿಕ ಹಲ್ಲೆ ವೇಳೆ ಮೃತಪಟ್ಟಿದ್ದು, ಆತನನ್ನು ಆಸ್ಪತ್ರೆಗೆ ಕರೆದೊಯ್ಯುವ ವಿಷಯದಲ್ಲಿ ವಿಳಂಬವಾಗಿದೆಯೇ, ಇದರಲ್ಲಿ ಪೊಲೀಸರ ಪಾತ್ರವಿದೆಯೇ ಎಂಬ ಬಗ್ಗೆ ಪ್ರಮುಖವಾಗಿ ವಿವರಣೆ ಕೇಳಿದೆ.