ಹಲ್ಲೆ ನಡೆಸುತ್ತಿದ್ದ ವೇಳೆ ಗುಂಪು ಒಬ್ಬರ ಹೆಸರನ್ನು ಒಬ್ಬರು ಹೇಳುತ್ತಿದ್ದರು. 7 ಮಂದಿಯ ಪೈಕಿ ವಿಜಯ್, ಧರ್ಮೇಂದ್ರ, ಪರಮ್ಜೀತ್, ನರೇಶ್ ಮತ್ತು ಸುರೇಶ್ ಎಂಬಐವರ ಹೆಸರುಗಳು ನೆನಪಿನಲ್ಲಿವೆ. ಹಲ್ಲೆ ನಡೆಸುತ್ತಿದ್ದ ವೇಳೆ ಗುಂಪು ಬಿಜೆಪಿ ಶಾಸಕರೊಬ್ಬರ ಹೆಸರನ್ನೂ ಹೇಳುತ್ತಿದ್ದರು. ನಮಗೆ ಬಿಜೆಪಿ ಶಾಸಕ ಜ್ಞಾನ್ ದೇವ್ ಅಹುಜಾ ಅವರ ಬೆಂಬಲವಿದ್ದು, ನಮ್ಮನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಎಂದು ಹೇಳಿದ್ದರು ಎಂದು ಅಸ್ಲಾಮ್ ಅವರು ತಿಳಿಸಿದ್ದಾರೆ.