ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಆಲ್ವಾರ್ ಸಾಮೂಹಿಕ ಹಲ್ಲೆ ಪ್ರಕರಣ: ಬಂಧಿತ ಗೋಸಂರಕ್ಷಕರನ್ನು ಬಿಡುಗಡೆಗೊಳಿಸುವಂತೆ ಬಿಜೆಪಿ ಶಾಸಕನ ಆಗ್ರಹ

ಆಲ್ವಾರ್ ಸಾಮೂಹಿಕ ಹತ್ಯೆ ಪ್ರಕರಣದಲ್ಲಿ ಬಂಧಿರಾಗಿರುವ ಗೋಸಂರಕ್ಷಕರನ್ನು ಬಿಡುಗಡೆಗೊಳಿಸುವಂತೆ ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾ ..
ರಾಜಸ್ತಾನ: ಆಲ್ವಾರ್ ಸಾಮೂಹಿಕ ಹತ್ಯೆ ಪ್ರಕರಣದಲ್ಲಿ ಬಂಧಿರಾಗಿರುವ ಗೋಸಂರಕ್ಷಕರನ್ನು ಬಿಡುಗಡೆಗೊಳಿಸುವಂತೆ ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾ ಆಗ್ರಹಿಸಿದ್ದಾರೆ. 
ಹಸು ಸಾಗಿಸುತ್ತಿದ್ದ ಎಂಬ ಶಂಕೆಯ ಮೇಲೆ 28 ವರ್,ದ ರಕ್ಬರ್ ಖಾನ್ ಮೇಲೆ ಹಲ್ಲೆ ನಡೆಸಲಾಗಿತ್ತು. ನಂತರ ಆತ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದ. ಹೀಗಾಗಿ ಪ್ರಕರಣವನ್ನು ಕಸ್ಟೋಡಿಯಲ್ ಡೆತ್ ಎಂದು ಪರಿಗಣಿಸಿ  ನ್ಯಾಯಾಂಗ ತನಿಖೆ ನಡೆಸುವಂತೆ ಗೃಹ ಸಚಿವ ಗುಲಬ್ ಚಂದ್ ಕಟಾರಿಯಾ ಆದೇಶಿಸಿದ್ದರು.
ರಕ್ಬರ್ ಖಾನ್ ಜನರ ಹಲ್ಲೆಯಿಂದ ಸಾವನ್ನಪ್ಪಿಲ್ಲ, ಆತ ಪೊಲೀಸರ ವಶದಲ್ಲಿದ್ದಾಗ ಸತ್ತಿದ್ದಾನೆ, ಹೀಗಾಗಿ ಮುಗ್ಧರನ್ನು ಏಕೆ ಪೊಲೀಸರು ಬಂಧಿಸಬೇಕು, ಬಂಧಿತರನ್ನು ಬಿಡುಗಡೆಗೊಳಿಸಬೇಕು ಎಂದು ಅಹುಜಾ ಗೃಹ ಸಚಿವರನ್ನು ಒತ್ತಾಯಿಸಿದ್ದಾರೆ. 
ಕೂಡಲೇ ಬಂಧಿರನ್ನು ಬಿಡುಗಡೆಗೊಳಿಸಬೇಕು ಎಂದಿರುವ ಶಾಸಕ ಅಹುಜಾ ಗೋಕಳ್ಳಸಾಗಣಿಕೆಯಲ್ಲಿ ತೊಡಗಿದ್ದ ಅಸ್ಲಾಂನನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com