ದೆಹಲಿಯ ಎಂಸಿ ಸೆಟಲ್ವಾಡ್ ಮೆಮೋರಿಯಲ್ ಹಾಲ್ ನಲ್ಲಿ ಬಾರ್ ಅಸೋಸಿಯೇಷನ್ ಆಫ್ ಇಂಡಿಯಾ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು, 'ಸಂವಿಧಾನಾತ್ಮಕ ಹಕ್ಕುಗಳ ಆರೋಹಣ-ಪ್ರಗತಿಶೀಲ ಪ್ರಸ್ತಾಪ' ಎಂಬ ವಿಚಾರದ ಕುರಿತು ಮಾತನಾಡಿದರು. ಈ ವೇಳೆ ವೈಯುಕ್ತಿಕ ಖಾಸಗಿತನ ಸಂವಿಧಾನ ನಮಗೆ ನೀಡಿರುವ ಹಕ್ಕು. ಯಾವುದೇ ಕಾರಣಕ್ಕೂ ಅದಕ್ಕೆ ಧಕ್ಕೆ ಬರಬಾರದು. ಜಗತ್ತಿನಲ್ಲಿ ಸಂವಿಧಾನಾತ್ಮಕ ಹಕ್ಕುಗಳಿಗೆ ಚ್ಯುತಿ ಬರುವ ಯಾವುದೇ ಕ್ಷೇತ್ರವೂ ಇಲ್ಲ. ಸಂವಿಧಾನದ ಹಕ್ಕು ಮಾನವಹಕ್ಕಾಗಿದ್ದು, ಅದರ ಅನುಷ್ಠಾನ ಕೂಡ ಸಂವಿಧಾನಾತ್ಮಕವಾದದ್ದು ಎಂದು ಹೇಳಿದರು.