ಜು.25 ರಂದು ದುಷ್ಕರ್ಮಿಗಳು ಹಳೆಯ ಮನೆಯೊಂದಕ್ಕೆ ಮೇಕೆಯನ್ನು ಕರೆದುಕೊಂಡು ಹೋಗಿದ್ದರು. 8 ಮಂದಿ ಆರೋಪಿಗಳ ಪೈಕಿ ಓರ್ವ ಮಾನಸಿಕ ಅಸ್ವಸ್ಥನಾಗಿದ್ದ. ಘಟನೆ ಬಳಿಕ ದೂರು ದಾಖಲಿಸುವುದಾಗಿ ತಿಳಿಸಿದಾಗ, ಏನೂ ಬೇಕಾದರೂ ಮಾಡಿಕೋ ಎಂದು ಹೇಳಿದ್ದರು. ನಮಗೆ ದೊಡ್ಡ ವ್ಯಕ್ತಿಗಳ ಪರಿಚಯವಿದ್ದು, ಜೈಲಿಗೆ ಹಾಕಿದರೂ ನಮಗೆ ಭಯವಿಲ್ಲ ಎಂದು ಹೇಳಿದ್ದರು ಎಂದು ಅಸ್ಲು ಅವರು ಹೇಳಿಕೊಂಡಿದ್ದಾರೆ.