ಲಖನೌದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿಯವರು, ಇತ್ತೀಚಿನ ದಿನಗಳಲ್ಲಿ ನನ್ನನ್ನು ಚೌಕಿದಾರ (ಕಾವಲುದಾರ) ಅಲ್ಲ ಬದಲಾಗಿ ಭಾಗೀದಾರ (ಜೊತೆಗಾರ) ಎಂದು ಟೀಕಿಸಲಾಗುತ್ತಿದೆ. ಬಡ ಜನರು, ಶ್ರಮ ಜೀವಿಗಳು, ಕಾರ್ಮಿಕರ ಸಮಸ್ಯೆಗಲಲ್ಲಿ ಭಾಗೀದಾರನಾಗಲು ನನಗೆ ಹೆಮ್ಮೆಯಿದೆ ಎಂದು ಹೇಳಿದ್ದಾರೆ.
ವೈದ್ಯ ಚಿಕಿತ್ಸೆ ವೆಚ್ಚ ಭರಿಸಲಾಗದೇ ಜಮೀನುಗಳನ್ನು ಮಾರಾಟ ಮಾಡುವ ಪರಿಸ್ಥಿತಿಗೆ ಸಿಲುಕಿರುವ ಬಡ ಕುಟುಂಬ, ನಿರ್ಗತಿಕರು, ಅನಕ್ಷರಸ್ಥ ಮಕ್ಕಳು ಮತ್ತು ನಿರುದ್ಯೋಗಿಗಲ ಸಮಸ್ಯೆಯಲ್ಲಿ ನಾನು ಭಾಗೀದಾರ ಎಂದು ರಾಹುಲ್ ಗಾಂಧಿಯವರಿಗೆ ತಿರುಗೇಟು ನೀಡಿದ್ದಾರೆ.