ಕೇಜ್ ತಹಶೀಲ್ ನ ವೀದಾ ಗ್ರಾಮದ ಅಭಿಜೀತ್ ದೇಶಮುಖ್ ತನ್ನ ಮನೆ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈತ ಆತ್ಮಹತ್ಯೆಗೆ ಮುನ್ನ ಬರೆದ ಡೆತ್ ನೋಟ್ ನಲ್ಲಿ ತಾನು ಮರಾಠಾ ಸಮುದಾಯಕ್ಕೆ ಮೀಸಲಾತಿ ದೊರಕಿಸುವ ಸಲುವಾಗಿ ನಡೆಯುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಈ ಕಠಿಣ ತೀರ್ಮಾನ ತೆಗೆದುಕೊಳ್ಳುತ್ತಿದ್ದೇನೆ ಎಂದು ಬರೆದಿದಾನೆ. ಅಲ್ಲದೆ ನಿರುದ್ಯೋಗ ಮತ್ತು ಬ್ಯಾಕ್ ಸಾಲದ ಸಮಸ್ಯೆಗಳನ್ನು ಸಹ ಆತ ತನ್ನ ಡೆತ್ ನೋಟ್ ನಲ್ಲಿ ವಿವರಿಸಿದ್ದಾಗಿ ಬೀಡ್ ಸಬ್ ಇನ್ಸ್ ಪೆಕ್ಟರ್ ಜಿ. ಶ್ರೀಧರ್ ಪಿಟಿಐಗೆ ತಿಳಿಸಿದ್ದಾರೆ.