ಇದೇ ವೇಳೆ ಆಗಮಿಸಿದ ಮತ್ತೊಂದು ಜೀಪಿನ ಮೇಲೂ ಅವರ ಆಕ್ರೋಶ ವ್ಯಕ್ತವಾದಾಗ, ಅದರ ಚಾಲಕ ಸಿಲ್ಲಿಸದೇ ಚಾಲನೆ ಮಾಡಿಕೊಂಡು ಹೋಗಿದ್ದ. ಈ ವೇಳೆ ಇಬ್ಬರು ಯುವಕರು ಜೀಪಿನ ಕೆಳಗೆ ಸಿಲುಕಿದ್ದರು. ಈ ದೃಸ್ಯ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಜೀಪ್ ಕೆಳಗೆ ಸಿಕ್ಕಿದ್ದ ಇಬ್ಬರು ಯುವಕರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಪೈಕಿ 21 ವರ್ಷದ ಕೈಸರ್ ಭಟ್ ಎಂಬಾತ ಶುಕ್ರವಾರ ತಡರಾತ್ರಿ ಮೃತಪಟ್ಟಿದ್ದ.