"ಮತದಾರರ ಗುರುತು ಚೀಟಿ ಆಧಾರ್ ಸಂಖ್ಯೆಯೊಡನೆ ಲಿಂಕ್ ಆದರೆ ನಮಗೆ ಸಮಸ್ಯೆ ಇಲ್ಲ, ಒಂದು ದೇಶ, ಒಂದು ಚುನಾವಣೆ ನೀತಿ ಜಾರಿಗೆ ಬಂದರೂ ಸಹ ನಾವು ಹೆದರುವುದಿಲ್ಲ. 2019ರಿಂದಲೇ ಒಂದು ದೇಶ ಒಂದು ಚುನಾವಣೆ ನೀತಿ ಜಾರಿಗೆ ಬರಬೇಕು. ಲೋಕಸಭಾ ಚುನಾವಣೆ ಸಮಯಕ್ಕೆ ಉತ್ತರ ಪ್ರದೇಶದ ವಿಧಾನಸಭೆಗೆ ಚುನಾವಣೆ ನಡೆಸಬೇಕೆಂದು ನಾನು ಬಿಜೆಪಿಯನ್ನು ಒತ್ತಾಯಿಸುತ್ತೇನೆ" ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಖಿಲೇಶ್ ಯಾದವ್ ಹೇಳಿದ್ದಾರೆ.