ಜಾರ್ಖಂಡ್: ನಕ್ಸಲೀಯರ ದಾಳಿಗೆ ಕೋಬ್ರಾ ಕಮಾಂಡೋ ಹುತಾತ್ಮ, ಪೊಲೀಸ್ ಅಧಿಕಾರಿಗೆ ಗಾಯ

ಜಾರ್ಖಂಡ್ ನಲ್ಲಿ ನಕ್ಸಲರು ನಡೆಸಿದ ದಾಳಿಯಲ್ಲಿ ಓರ್ವ ಕೋಬ್ರಾ ಕಮಾಂಡೋ ಪಡೆಯ ಯೋಧ ಹುತಾತ್ಮನಾಗಿದ್ದು, ಓರ್ವ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ರಾಂಚಿ: ಜಾರ್ಖಂಡ್ ನಲ್ಲಿ ನಕ್ಸಲರು ನಡೆಸಿದ ದಾಳಿಯಲ್ಲಿ ಓರ್ವ ಕೋಬ್ರಾ ಕಮಾಂಡೋ ಪಡೆಯ ಯೋಧ ಹುತಾತ್ಮನಾಗಿದ್ದು, ಓರ್ವ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ.
ಜಾರ್ಖಂಡ್ ನ ಸರೈಕೆಲಾ ಜಿಲ್ಲೆಯ ಕುಂತಿ ಗಡಿಯ ಕಾರು ಕುಚೈ ಎಂಬ ಪ್ರದೇಶದಲ್ಲಿ ನಕ್ಸಲರು ಬೀಡು ಬಿಟ್ಟಿರುವ ಕುರಿತು ಮಾಹಿತಿ ಪಡೆದ ಸಿಆರ್ ಪಿಎಫ್ ನ ಕೋಬ್ರಾ ಕಮಾಂಡೋ ಪಡೆ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದು, ಭೀಕರ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಕೋಬ್ರಾ ಕಮಾಂಡೋ ಪಡೆಯ ಯೋಧನಿಗೆ ಗುಂಡೇಟು ತಗುಲಿ ಹುತಾತ್ಮನಾಗಿದ್ದು, ಅಂತೆಯೇ ಸ್ಥಳೀಯ ಎಸಿಪಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಎನ್ ಕೌಂಟರ್ ಪ್ರಗತಿಯಲ್ಲಿದ್ದು, ಘಟನಾ ಪ್ರದೇಶವನ್ನು ಸೈನಿಕರು ಸುತ್ತುವರೆದಿದ್ದಾರೆ.
ಘಟನಾ ಸ್ಥಳಕ್ಕೆ ತುರ್ತಾಗಿ ಒಂದು ಆ್ಯಂಬುಲೆನ್ಸ್ ಮತ್ತು ಹೆಲಿಕಾಪ್ಟರ್ ರವಾನೆ ಮಾಡಲಾಗಿದ್ದು, ಗಾಯಾಳು ಸೈನಿಕರನ್ನು ಏರ್ ಲಿಫ್ಟ್ ಮಾಡಲಾಗುತ್ತಿದೆ. 
ಪೊಲೀಸ್ ಮೂಲಗಳು ತಿಳಿಸಿರುವಂತೆ ಕುಖ್ಯಾತ ನಕ್ಸಲ್ ಮುಖಂಡ ಮಹಾರಾಜ್ ಪ್ರಮಾಣಿಕ್ ಸ್ಥಳದಲ್ಲಿದ್ದ ಎಂದು ತಿಳಿದುಬಂದಿದೆ. ಇನ್ನು ನಕ್ಸಲ್ ತಂಡದಲ್ಲೂ ಸಾಕಷ್ಟು ಸಾವು-ನೋವುಗಳಾಗಿರುವ ಶಂಕೆ ಇದ್ದು, ಶೋಧ ಕಾರ್ಯದ ಬಳಿಕ ವಿವರ ತಿಳಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com