ಪ್ರಧಾನಿ ಮೋದಿ ಹತ್ಯೆಗೆ ರಚಿಸಲಾಗಿರುವ ಸಂಚು ಯಶಸ್ವಿಯಾಗಲು ಸೇನಾಪಡೆಗಳು ಬಿಡುವುದಿಲ್ಲ; ಹನ್ಸ್'ರಾಜ್ ಅಹಿರ್

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹತ್ಯೆಗೆ ಸಂಚುಗಳನ್ನು ರೂಪಿಸಲಾಗಿದ್ದು, ಇಂತಹ ಸಂಚುಗಳು ಯಶಸ್ವಿಯಾಗಲು ಭದ್ರತಾ ಪಡೆಗಳು ಬಿಡುವುಡಿಲ್ಲ ಎಂದು ಕೇಂದ್ರ ಗೃಹ ಖಾತೆಗಳ ರಾಜ್ಯ ಸಚಿವ ಹನ್ಸ್'ರಾಜ್ ಅಹಿರ್ ಅವರು ಶನಿವಾರ ಹೇಳಿದ್ದಾರೆ...
ಕೇಂದ್ರ ಗೃಹ ಖಾತೆಗಳ ರಾಜ್ಯ ಸಚಿವ ಹನ್ಸ್'ರಾಜ್ ಅಹಿರ್
ಕೇಂದ್ರ ಗೃಹ ಖಾತೆಗಳ ರಾಜ್ಯ ಸಚಿವ ಹನ್ಸ್'ರಾಜ್ ಅಹಿರ್
ಚಂದ್ರಾಪುರ (ಮಹಾರಾಷ್ಟ್ರ): ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹತ್ಯೆಗೆ ಸಂಚುಗಳನ್ನು ರೂಪಿಸಲಾಗಿದ್ದು, ಇಂತಹ ಸಂಚುಗಳು ಯಶಸ್ವಿಯಾಗಲು ಭದ್ರತಾ ಪಡೆಗಳು ಬಿಡುವುಡಿಲ್ಲ ಎಂದು ಕೇಂದ್ರ ಗೃಹ ಖಾತೆಗಳ ರಾಜ್ಯ ಸಚಿವ ಹನ್ಸ್'ರಾಜ್ ಅಹಿರ್ ಅವರು ಶನಿವಾರ ಹೇಳಿದ್ದಾರೆ. 
ಪ್ರಧಾನಿ ಮೋದಿ ಹತ್ಯೆ ಸಂಚು ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಮೋದಿ ಹತ್ಯೆ ಸಂಚು ಯಶಸ್ವಿಗೊಳ್ಳಲು ಭದ್ರತಾತ ಪಡೆಗಳು ಬಿಡುವಿದಿಲ್ಲ. ಸರ್ಕಾರ ಮತ್ತು ಗೃಹ ಸಚಿವಾಲಯ ಇಂತಹ ಸಂಚುಗಳ ಹಿಂದಿರುವವರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. 
ಪ್ರಕರಣ ಸಂಬಂಧ ಈಗಾಗಲೇ ಹಲವರನ್ನು ಬಂಧನಕ್ಕೊಳಪಡಿಸಲಾಗಿದೆ. ತನಿಖೆ ಕೂಡ ಪ್ರಗತಿಯಲ್ಲಿದೆ. ಇಂತಹ ಕ್ರಿಮಿನಲ್'ಗಳನ್ನು ಕ್ಷಮಿಸುವುದಿಲ್ಲ ಎಂಬುದರ ಕುರಿತು ಭರವಸೆ ನೀಡುತ್ತೇನೆಂದು ತಿಳಿಸಿದ್ದಾರೆ. 
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಆತ್ಮಾಹುತಿ ಬಾಂಬ್ ಬಳಸಿ 27 ವರ್ಷಗಳ ಹಿಂದೆ ಹತ್ಯೆ ಮಾಡಿದ ರೀತಿಯಲ್ಲಿಯೇ ಹಾಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನೂ ಕೊಲ್ಲಲು ಭಯಾನಕ ಸಂಚೊಂದು ರೂಪಿತವಾಗಿರುವ ಆತಂಕಕಾರಿ ಮಾಹಿತಿಯೊಂದು ನಿನ್ನೆಯಷ್ಟೇ ಬೆಳಕಿಗೆ ಬಂದಿತ್ತು. 
ಸಂಚಿನ ಹಿಂದಿನ ರೂವಾರಿಗಳು ಪಾಕಿಸ್ತಾನ ಮೂಲದ ಭಯೋತ್ಪಾದಕರಲ್ಲ. ದೇಶದೊಳಗೇ ಇರುವ ನಗರವಾಸಿ ನಕ್ಸಲರಾಗಿದ್ದಾರೆಂದು ಪೊಲೀಸರು ತಿಳಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com