ಹರ್ಯಾಣದ ಎಸ್ ಟಿಎಫ್ ಅಧಿಕಾರಿಗಳು ಸಂಪತ್ ನೆಹ್ರಾನನ್ನು ಬಂಧಿಸಿದ್ದು, ಮುಂಬೈಗೆ ತೆರಳಿದ್ದ ಸಂಪತ್ ನೆಹ್ರಾ ನಟ ಸಲ್ಮಾನ್ ಖಾನ್ ಕುರಿತ ಮಾಹಿತಿ ಕಲೆ ಹಾಕುತ್ತಿದ್ದನಂತೆ. ಸಲ್ಮಾನ್ ಖಾನ್ ಅವರ ಮುಂಬೈ ನಿವಾಸದ ಬಳಿಯೇ ಅವರನ್ನು ಕೊಂದು ಬಳಿಕ ವಿದೇಶಕ್ಕೆ ಪರಾರಿಯಾಗಲು ಸಂಪತ್ ರಾಜ್ ಸಂಚು ರೂಪಿಸಿದ್ದನಂತೆ. ಇದಕ್ಕೆ ಪಾತಕಿ ಲಾರೆನ್ಸ್ ಬಿಷ್ಣೋಯ್ ನೆರವು ನೀಡುವುದಾಗಿ ಹೇಳಿದ್ದನಂತೆ.